ಕಾವೇರಿ ವಿವಾದದ ಅಂತಿಮ ತೀರ್ಪು : ಯಾರಿಗೆ ಒಲಿತಾಳೆ ಕಾವೇರಿ ?

16 Feb 2018 10:19 AM | General
377 Report

ಕಾವೇರಿ ನೀರಿನ ಅಂತಿಮ ತೀರ್ಪಿನ ಹಿನ್ನಲೆ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದೆಲ್ಲಡೆ ಬಂದೋಬಸ್ತು ಏರ್ಪಡಿಸಲಾಗಿದೆ. ತಮಿಳು ನಾಡಿನ ಬಸ್ ಸ್ತಗಿತಗೊಳಿಸಲಾಗಿದೆ. ಕಾವೇರಿ ವಿವಾದದ ತೀರ್ಪಿಗೆ ಕ್ಷಣಗಣನೆ ಆರಂಭವಾಗಿದೆ ಯಾವ ರಾಜ್ಯಕ್ಕೆ ಕಾವೇರಿ ಸಿಹಿ, ಯಾವ ರಾಜ್ಯಕ್ಕೆ ಕಹಿ ಕೊಡುತ್ತಾಳೋ ನೋಡಬೇಕಿದೆ.

ಬೆಳಿಗ್ಗೆ 10-30 ರ ಸುಮಾರಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಅಂತಿಮ ತೀರ್ಪು ಪ್ರಕಟಿಸಲಿದೆ. ಮಂಡ್ಯ ಜಿಲ್ಲೆಯಲ್ಲಿ ಭಾರೀ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಭದ್ರತೆಗಾಗಿ 8 ಡಿ ವೈ ಎಸ್ ಪಿ, 25 ಸಿಪಿಐ, 60 ಪಿ ಎಸ್ ಐ, 150 ಎ ಎಸ್ ಐ ಹಾಗೂ 1300 ಮಂದಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಮದ್ಯ ಮಾರಾಟ ನಿಷೇಧಿಸಲಾಗಿದ್ದು, ತೀರ್ಪಿನ ಬಳಿಕ ಯಾವುದೇ ಮೆರವಣಿಗೆಗೆ ಅನುಮತಿ ನೀಡದಿರಲು ನಿರ್ಧರಿಸಲಾಗಿದೆ.

 

Edited By

Shruthi G

Reported By

Madhu shree

Comments