ಕನ್ನಡ ಕಲಿಕೆಗೆ ಒತ್ತು ನೀಡಿದ ಹಿನ್ನೆಲೆ ಪೋಷಕರ ಪರದಾಟ

15 Feb 2018 3:21 PM | General
324 Report

1 ರಿಂದ 5 ನೇ ತರಗತಿಯವರೆಗೆ ಎಲ್ಲಾ ಶಾಲೆಗಳಲ್ಲಿಯೂ ಕನ್ನಡ ಕಲಿಸಲೇಬೇಕು ಎನ್ನುವ ನಿಯಮವನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಕನ್ನಡ ಭಾಷೆಯ ಕಲಿಕೆಯನ್ನು ಉತ್ತೇಜಿಸಲು ಈ ನಿಯಮವನ್ನು ಜಾರಿಗೊಳಿಸಿದ್ದು ಇದು ಕನ್ನಡಿಗೇತರ ಪೋಷಕರಿಗೆ ಸಮಸ್ಯೆಯನ್ನು ತಂದೊಡ್ಡಿದೆ.

ಹಲವು ಜನರು ತಮ್ಮ ಮಕ್ಕಳ ಅಂಕಗಳ ಕುರಿತು ಚಿಂತಿತರಾಗಿದ್ದು ಅವರನ್ನು ಟ್ಯೂಶನ್ ಗಳಿಗೆ ಕಳುಹಿಸಲು ಪ್ರಾರಂಭಿಸಿದ್ದಾರೆ. ಕೆಲವು ಪೋಷಕರು ಕನ್ನಡವನ್ನು ಕಲಿಯಲು ಆನ್ಲೈನ್ ಕೋರ್ಸ್ ಗಳನ್ನು ಸೇರಿಕೊಂಡಿದ್ದಾರೆ. ಕನ್ನಡಿಗೇತರ ಪೋಷಕರಿಗೆ ಮತ್ತು ಮಕ್ಕಳಿಗಿಬ್ಬರಿಗೂ ಕಠಿಣ ಸ್ಥಿತಿ ಎದುರಾಗಿದ್ದು ಮಕ್ಕಳು ಬಲವಂತವಾಗಿ ಕನ್ನಡವನ್ನು ಕಲಿಯಬೇಕಾಗಿದೆ. "ಒಬ್ಬ ಪೋಷಕಳಾಗಿ, ನನ್ನ ಮಗು ಈಗಾಗಲೇ ಹೆಚ್ಚಿನ ಸಿಲಬಸ್ ನೊಂದಿಗೆ ಕಷ್ಟಪಡುತ್ತಿರುವಾಗ ಕನ್ನಡ ಕಲಿಕೆಯಲ್ಲಿ ನಾನು ಹೇಗೆ ಸಹಾಯ ಮಾಡಬೇಕು ಎಂದು ಚಿಂತಿತಳಾಗಿದ್ದೇನೆ. ಈಗಾಗಲೇ ಇರುವ ಸಿಲೆಬಸ್ ಮತ್ತು ಕಳಪೆ ಗುಣಮಟ್ಟದ ಬೋಧನೆಯಿಂದ ಮಕ್ಕಳು ಬಹಳಷ್ಟು ಬಳಲುತ್ತಿದ್ದಾರೆ, ಇದು ಕೇವಲ ಅವರ ಸಮಸ್ಯೆಯನ್ನು ಹೆಚ್ಚಿಸುತ್ತದೆ ಎಂದು ಒಬ್ಬ ಪೋಷಕರಾಗಿ ತಮ್ಮ ತೊಂದರೆಯನ್ನು ಹಂಚಿಕೊಂಡಿದ್ದಾರೆ.

Edited By

Shruthi G

Reported By

Madhu shree

Comments