ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಕಂಬಾರರು

12 Feb 2018 3:24 PM | General
566 Report

ಇಂದು ನಡೆದ ಚುನಾವಣೆಯಲ್ಲಿ ಕಂಬಾರ ಅವರು 59 ಮತಗಳನ್ನು ಪಡೆದರೆ ತಮ್ಮ ಪ್ರತಿಸ್ಪರ್ಧಿ ಒಡಿಯಾದ ಬರಹಗಾರ್ತಿ ಪ್ರತಿಭಾ ರೋಯದ್ ಅವರು 29 ಮತಗಳನ್ನಷ್ಟೇ ಪಡೆದರು. ಅಂತಿಮವಾಗಿ ವಿಜಯಮಾಲೆ ಕಂಬಾರ ಅವರಗೆ ಒಲಿಯಿತು.

ಈ ಮೂಲಕ ಕನ್ನಡಿಗರೊಬ್ಬರು ಅತ್ಯುನ್ನತ ಕೇಂದ್ರ ಸಾಹಿತ್ಯ ಅಕಾಡೆಮಿ ಮೂರನೇ ಅಧ್ಯಕ್ಷರೆಂಬ ಹೆಗ್ಗಳಿಕೆಗೆ ಡಾ.ಚಂದ್ರಶೇಖರ್ ಕಂಬಾರ ಪಾತ್ರರಾಗಿದ್ದಾರೆ. ಈ ಹಿಂದೆ ಜ್ಞಾನಪೀಠ ಪ್ರಶಸ್ತಿ ಪುರಸ್ಕoತರಾದ ವಿ.ಕೆ.ಗೋಕಾಕ್(1983) ಹಾಗೂ ಮತ್ತೋರ್ವ ಜ್ಞಾನಪೀಠ ಪ್ರಶಸ್ತಿ ಪುರಸ್ಕoತ ಡಾ.ಯು.ಆರ್. ಅನಂತಮೂರ್ತಿ(1993) ಈ ಹುದ್ದೆಯನ್ನು ಅಲಂಕರಿಸಿದ್ದರು. ಸರಿಸುಮಾರು ಎರಡೂವರೆ ದಶಕಗಳ ನಂತರ ಅಕಾಡೆಮಿಗೆ ಕನ್ನಡಿಗರೊಬ್ಬರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪ್ರಸ್ತುತ ಡಾ.ವಿಶ್ವನಾಥ್ ಪ್ರಸಾದ್ ತಿವಾರಿ ಅಧ್ಯಕ್ಷರಾಗಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿ 99 ಮಂದಿ ಸದಸ್ಯರಿದ್ದು , ಕೇಂದ್ರ ಸರ್ಕಾರ ಐದು ಮಂದಿಯನ್ನು ನಾಮನಿರ್ದೇಶನ ಮಾಡುತ್ತದೆ.

 

Edited By

Shruthi G

Reported By

Madhu shree

Comments