ಕಾಂಗ್ರೆಸ್’ಗೆ ನೀಡಿರುವ ಬೆಂಬಲ ಹಿಂಪಡೆಯುವಂತೆ ಇಂಗಿತ ಹೊರಹಾಕಿದ ಜೆಡಿಎಸ್

30 Dec 2017 11:35 AM | General
3875 Report

ರಾಜ್ಯ ಸರ್ಕಾರ ತನ್ನ ಬಜೆಟ್‌ನಲ್ಲಿ ಬಿಬಿಎಂಪಿಗೆ ಘೋಷಿಸಿದ್ದ ₹7,300 ಕೋಟಿ ಅನುದಾನ ಬಳಕೆಗೆ ರೂಪಿಸಿದ್ದ ಕ್ರಿಯಾ ಯೋಜನೆಗಳನ್ನು ಪಾಲಿಕೆ ಅನುಮೋದನೆ ಪಡೆಯದೆ ಸರ್ಕಾರವೇ ಮಂಜೂರಾತಿ ನೀಡಿರುವುದಕ್ಕೆ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಶುಕ್ರವಾರ ಪ್ರತಿಪಕ್ಷ ಬಿಜೆಪಿ ಹಾಗೂ ಆಡಳಿತದ ಮೈತ್ರಿ ಜೆಡಿಎಸ್ ಸದಸ್ಯರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ಅಲ್ಲದೆ, ಬಿಜೆಪಿ ಹೋರಾಟದ ಎಚ್ಚರಿಕೆ ನೀಡಿದರೆ, ಜೆಡಿಎಸ್ ಪಕ್ಷವು ಬೆಂಬಲವನ್ನು ಹಿಂಪಡೆಯುವ ಬೆದರಿಕೆಯೊಡ್ಡಿದೆ.

ಬಿಬಿಎಂಪಿ ಆಯುಕ್ತರು ಕೂಡಲೇ ಸರ್ಕಾರದಿಂದ ನೇರವಾಗಿ ಅನುಮೋದನೆ ಪಡೆದಿರುವ ಎಲ್ಲ ಕ್ರಿಯಾ ಯೋಜನೆಗಳನ್ನು ವಾಪಸ್ ತರಿಸಿಕೊಂಡು ಸ್ಥಾಯಿ ಸಮಿತಿಗಳ ಮೂಲಕ ಕೌನ್ಸಿಲ್‌ನಲ್ಲಿ ಚರ್ಚಿಸಿ ಒಪ್ಪಿಗೆ ಪಡೆಯಬೇಕು.ಇಲ್ಲದಿದ್ದರೆ ಈ ವಿಚಾರವಾಗಿ ಹೋರಾಟ ನಡೆಸಬೇಕಾಗುತ್ತದೆ ಎಂದು ಬಿಜೆಪಿ ಸದಸ್ಯರು ಎಚ್ಚರಿಕೆ ನೀಡಿದರು. ಜೆಡಿಎಸ್ ಸದಸ್ಯರು, ಪಾಲಿಕೆ ಆಡಳಿತದಲ್ಲಿ ಕಾಂಗ್ರೆಸ್ ನಮ್ಮನ್ನು ಸಹಮತಕ್ಕೆ ತೆಗೆದುಕೊಳ್ಳದೆ ಹಳೇ ಚಾಳಿ ಮುಂದುವರಿಸಿದೆ, ಇದು ಹೀಗೇ ಮುಂದುವರಿದರೆ ಬಿಬಿಎಂಪಿ ಆಡಳಿತದಲ್ಲಿ ಕಾಂಗ್ರೆಸ್’ಗೆ ನೀಡಿರುವ ಬೆಂಬಲವನ್ನೇ ಹಿಂಪಡೆಯುವ ಬೆದರಿಕೆ ಹಾಕಿದರು.

ವಿಶೇಷ ಎಂದರೆ, ಈ ವೇಳೆ ಜೆಡಿಎಸ್ ಪಕ್ಷದಿಂದ ಪಕ್ಷದ ಪಾಲಿಕೆ ನಾಯಕಿ ನೇತ್ರಾನಾರಾಯಣ್ ಮತ್ತು ಸದಸ್ಯ ಇಮ್ರಾನ್‌ಪಾಷಾ ಇಬ್ಬರೇ ಹಾಜರಿದ್ದರು. ಮಧ್ಯಾಹ್ನದ ನಂತರ ಸಭೆಗೆ ಹಾಜರಾದ ಇಮ್ರಾನ್ ಪಾಷಾ ಸಭೆ ಇನ್ನೇನು ಮುಕ್ತಾಯದ ಹಂತದಲ್ಲಿದ್ದಾಗ ಮಾತನಾಡಿ, ‘ಬಿಬಿಎಂಪಿಯಲ್ಲಿ ಸಂವಿಧಾನದ 74ನೇ ತಿದ್ದುಪಡಿಗೆ ಮರ್ಯಾದೆಯೇ ಸಿಗುತ್ತಿಲ್ಲ. ನಮ್ಮ (ಜೆಡಿಎಸ್) ಬೆಂಬಲದಿಂದ ನೀವು (ಕಾಂಗ್ರೆಸ್) ಅಧಿಕಾರದಲ್ಲಿ ಕುಳಿತಿದ್ದೀರ. ನೀವು ಇದೇ ರೀತಿ ಮಾಡುತ್ತಿದ್ದರೆ ನಿಮಗೆ ನೀಡಿರುವ ಬೆಂಬಲ ವಾಪಸ್ ಪಡೆಯುತ್ತೇವೆ. ಈ ಬಗ್ಗೆ ನಮ್ಮ ನಾಯಕರು ನಿರ್ಧಾರ ಮಾಡಿದ್ದಾರೆ’ ಎಂದರು.

ಗುಣಮಟ್ಟ ಪರಿಶೀಲಿಸದೆ ಹಣ ಬಿಡುಗಡೆ : ನೇತ್ರಾ ನಾರಾಯಣ್ ಆಕ್ರೋಶ : ಬಿಬಿಎಂಪಿ ವ್ಯಾಪ್ತಿಯಲ್ಲಿ ವೈಟ್ ಟಾಪಿಂಗ್ ಸೇರಿದಂತೆ ನಗರೋತ್ಥಾನ ಯೋಜನೆಯಡಿ ಕೈಗೆತ್ತಿಕೊಂಡಿರುವ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸದೆ ಟೆಂಡರ್ ನಿಯಮಾವಳಿಗಳನ್ನು ಉಲ್ಲಂಘಿಸಿ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಲಾಗಿದೆ ಎಂದು ಪಾಲಿಕೆ ಜೆಡಿಎಸ್ ನಾಯಕಿ ನೇತ್ರಾನಾರಾಯಣ್ ಆರೋಪಿಸಿ ದರು. ಸಂಸ್ಥೆಗಳನ್ನು ಏಜೆನ್ಸಿಗಳನ್ನಾಗಿ ನೇಮಕ ಮಾಡಿದೆ. ಸಂಸ್ಥೆಗಳನ್ನು ಗುಣಮಟ್ಟ ಪರಿಶೀಲನೆಗೆ ಆಹ್ವಾನವನ್ನೇ ನೀಡಿಲ್ಲ. ತಾವು ಖುದ್ದು ಬರೆದ ಪತ್ರಕ್ಕೆ ಈ ಸಂಸ್ಥೆಗಳೇ ಪರಿಶೀಲನೆಗೆ ತಮ್ಮನ್ನು ಆಹ್ವಾನಿಸಿಲ್ಲ ಎಂದು ಉತ್ತರಿಸಿದೆ ಎಂದರು.

 

Edited By

Shruthi G

Reported By

Shruthi G

Comments