ಮಹದಾಯಿ ಬೆಂಬಲಿಸಿ ಮದ್ದೂರಿನಲ್ಲಿ ರಸ್ತೆ ತಡೆ
ಮಹಾದಾಯಿ ಕುಡಿಯುವ ನೀರಿನ ಯೋಜನೆ ವಿವಾದವನ್ನು ಬಗೆಹರಿಸುವಂತೆ ಒತ್ತಾಯಿಸಿ ತೆಂಗುಬೆಳೆಗಾರರ ಸಂಘದ ವತಿಯಿಂದ ಪಟ್ಟಣದ ಸಡಿಕಾರಿ ಬಸ್ ನಿಲ್ದಾಣದ ಬಳಿ ಬೆಂಗಳೂರು ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದರು.
ರಾಜ್ಯ ಹಾಗೂ ಕೇಂದ್ರ ಸರಕಾರ ಈ ಕೂಡಲೇ ಮಹದಾಯಿ ವಿವಾದ ಸರಿಪಡಿಸದೆ ಹೋದರೆ ಮುಂದಿನ ದಿನಗಳಲ್ಲಿ ತೆಂಗುಬೆಳೆಗಾರರ ಸಂಘದ ವತಿಯಿಂದ ಉಗ್ರವಾದ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು. ಸಂಘದ ರಾಜ್ಯಾಧ್ಯಕ್ಷ ಲಕ್ಷ್ಮಣ್ಚನ್ನಸಂದ್ರ, ತಮ್ಮಣ್ಣಗೌಡ, ಜಮೀರ್ ಅಹಮದ್, ಅರುಣ್, ಪರ್ವಿಜ್ಪಾಷ, ಕಾಜಾ, ನಾಗರಾಜು ಇನ್ನಿತರರು ಪ್ರತಿಭಟನೆಯ ನೇತೃತ್ವವಹಿಸಿದ್ದರು.
Comments