ಮಹದಾಯಿ ಬೆಂಬಲಿಸಿ ಮದ್ದೂರಿನಲ್ಲಿ ರಸ್ತೆ ತಡೆ

28 Dec 2017 10:24 AM | General
249 Report

ಮಹಾದಾಯಿ ಕುಡಿಯುವ ನೀರಿನ ಯೋಜನೆ ವಿವಾದವನ್ನು ಬಗೆಹರಿಸುವಂತೆ ಒತ್ತಾಯಿಸಿ ತೆಂಗುಬೆಳೆಗಾರರ ಸಂಘದ ವತಿಯಿಂದ ಪಟ್ಟಣದ ಸಡಿಕಾರಿ ಬಸ್ ನಿಲ್ದಾಣದ ಬಳಿ ಬೆಂಗಳೂರು ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ  ಮಾಡಿದರು.

 ರಾಜ್ಯ ಹಾಗೂ ಕೇಂದ್ರ ಸರಕಾರ ಈ ಕೂಡಲೇ ಮಹದಾಯಿ ವಿವಾದ ಸರಿಪಡಿಸದೆ ಹೋದರೆ ಮುಂದಿನ ದಿನಗಳಲ್ಲಿ ತೆಂಗುಬೆಳೆಗಾರರ ಸಂಘದ ವತಿಯಿಂದ ಉಗ್ರವಾದ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು. ಸಂಘದ ರಾಜ್ಯಾಧ್ಯಕ್ಷ ಲಕ್ಷ್ಮಣ್‍ಚನ್ನಸಂದ್ರ, ತಮ್ಮಣ್ಣಗೌಡ, ಜಮೀರ್ ಅಹಮದ್, ಅರುಣ್, ಪರ್ವಿಜ್‍ಪಾಷ, ಕಾಜಾ, ನಾಗರಾಜು ಇನ್ನಿತರರು ಪ್ರತಿಭಟನೆಯ ನೇತೃತ್ವವಹಿಸಿದ್ದರು.

Edited By

venki swamy

Reported By

Madhu shree

Comments