ಬಿಬಿಎಂಪಿ ಕರ್ಮಕಾಂಡಗಳಿಗೆ ಕೊನೆಯೇ ಇಲ್ಲವೇ?

28 Nov 2017 11:09 AM | General
323 Report

ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಪಾಲಿಕೆಯಿಂದ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗಿತ್ತು, ಆದರೆ ಅದರಲ್ಲಿ ಕೋಟ್ಯಾಂತರ ರೂಪಾಯಿಯನ್ನು ಬಿಬಿಎಂಪಿ ಅಧಿಕಾರಿಗಳು ತಮ್ಮ ಜೇಬಿಗೆ ಇಳಿಸಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ.

ಮಳೆ ಪರಿಹಾರ ವಿತರಣೆಯಲ್ಲಿ ಗೋಲ್​ಮಾಲ್ ನಡೆದಿದೆ ಎಂಬ ಸುದ್ದಿ ಕೇಳಿ ಬಂದಿದ್ದು, ಬಿಬಿಎಂಪಿ ಕರ್ಮಕಾಂಡಗಳಿಗೆ ಕೊನೆಯೇ ಇಲ್ಲವೇ ಅನ್ನುವ ಪ್ರಶ್ನೆ ಸಾರ್ವಜನಿಕರನ್ನು ಕಾಡಲಾರಂಭಿಸಿದೆ. ಮಹಾಲಕ್ಷ್ಮಿ ಲೇ ಔಟ್​​​​​​ ವಿಧಾನಸಭಾ ಕ್ಷೇತ್ರ ಹಾಗೂ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಗೋಲ್​​ಮಾಲ್​ ನಡೆದಿದ್ದು, ಈ ಎರಡೂ ಕ್ಷೇತ್ರಗಳಲ್ಲಿ ಪರಿಹಾರದ ರೂಪದಲ್ಲಿ 6,440 ಫಲಾನುಭವಿಗಳಿಗೆ 5200 ರೂಪಾಯಿ ರೂಪದಲ್ಲಿ ಒಟ್ಟು 3 ಕೋಟಿ 34 ಲಕ್ಷದ 88 ಸಾವಿರ ಹಣ ವಿತರಣೆ ಮಾಡಿರುವುದಾಗಿ ಪಾಲಿಕೆ ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಆದರೆ ಇದರ ಅರ್ಧದಷ್ಟೂ ಮನೆಗಳಿಗೆ ಹಾನಿಯೇ ಆಗಿಲ್ಲ ಎನ್ನುವುದು ವಾಸ್ತವ.

Edited By

Hema Latha

Reported By

Madhu shree

Comments