ದಸರಾ ಜಾತಿ, ಧರ್ಮ ಮೀರಿದ್ದು: ನಿಸಾರ ಅಹ್ಮದ್

21 Sep 2017 10:14 PM | General
301 Report

ಚಾಮುಂಡಿಬೆಟ್ಟದಲ್ಲಿ ದಸರಾಗೆ ಚಾಲನೆ ನೀಡಿ ಮಾತನಾಡಿದ ನಿಸಾರ್ ಅಹ್ಮದ್ ಅವರು, ಇದಕ್ಕಿಂತ ದೊಡ್ಡ ಸಂತೋಷ ಮತ್ತೊಂದಿಲ್ಲ. ಪದ್ಮಶ್ರೀ, ನಾಡೋಜ ಪ್ರಶಸ್ತಿಗಿಂತ ದಸರಾ ಉದ್ಘಾಟನೆ ದೊಡ್ಡದು. ವಿಜಯನಗರ ಕಾಲದಿಂದ ಮೈಸೂರು ಅರಸರವರೆಗೆ ಐತಿಹಾಸಿಕವಾಗಿ ನಡೆದಿದೆ. ದಸರಾಗೆ ಧಾರ್ಮಿಕ ಬೇರು ಇದ್ದರೂ ಸಾಂಸ್ಕೃತಿಕ ರಂಬೆ ಕೊಂಬೆ ಒಡಮೂಡಿವೆ. ಅಜ್ ನಲ್ಲಿ ಮುಸ್ಲಿಮರು ಮಾತ್ರ ಸೇರ್ತಾರೆ. ಆದ್ರೆ ದಸರಾದಲ್ಲಿ ಜಾತಿ, ಧರ್ಮ ಮೀರಿ ಪ್ರಪಂಚದ ಎಲ್ಲರೂ ಸೇರುತ್ತಾರೆ.

ಇದು ಕನ್ನಡದ ಅಸ್ಮಿತೆ ಸಾರುವ ಹಬ್ಬ ಎಂದು ಬಣ್ಣಿಸಿದರು.ಸಿಎಂ ಸಿದ್ದರಾಮಯ್ಯ ನಾಡಿನ ಜನತೆಗೆ, ವಿಶೇಷವಾಗಿ ಮೈಸೂರು ಜನತೆಗೆ ದಸರಾ ಶುಭಾಶಯ ಕೋರಿದರು. ದಸರಾ ಸರಳ ಮತ್ತು ಸಾಂಪ್ರದಾಯಿಕ ಆಚರಣೆಗೆ ತೀರ್ಮಾನ ಮಾಡಲಾಗಿತ್ತು. ಭೀಕರ ಬರಗಾಲ ಹಿನ್ನೆಲೆಯಲ್ಲಿ ಸರಳ ಸಾಂಪ್ರದಾಯಿಕ ಆಚರಣೆಗೆ ತೀರ್ಮಾನ ಮಾಡಲಾಗಿತ್ತು.

ಉನ್ನತ ಮಟ್ಟದ ಸಮಿತಿಯಲ್ಲಿ ದಸರಾ ಉದ್ಘಾಟಕರ ಬಗ್ಗೆ ಚರ್ಚೆಯಾದಾಗ ನಾಡೋಜ ನಿಸಾರ್ ಅಹಮದ್ ಹೆಸರು ಹೇಳಿದಾಗ ಎಲ್ಲರೂ ಒಮ್ಮತದಿಂದ ಒಪ್ಪಿದರು. ವೈಚಾರಿಕ ಚಿಂತಕರಾದ ನಿಸಾರ್ ಅಹಮದ್ ದಸರಾ ಉದ್ಘಾಟನೆಗೆ ಆಗಮಿಸಿದ್ದು ನಮಗೆ ಗೌರವ ತಂದಿದೆ. ಎಲ್ಲರೂ ಸಮಾಜದಲ್ಲಿ ಪ್ರೀತಿ ಸಹಬಾಳ್ವೆಯಿಂದ ಬದುಕಬೇಕು ಎಂದು ಅಂದುಕೊಂಡವರು. ಅವರ ಜತೆ ನನಗೆ ಹಲವು ವರ್ಷಗಳ ಒಡನಾಟವಿದೆ ಎಂದರು.

ವಿಶ್ವವಿಖ್ಯಾತ ನಾಡಹಬ್ಬ ದಸರಾಗೆ ಚಾಮುಂಡಿ‌ ಬೆಟ್ಟದಲ್ಲಿ ಅದ್ಧೂರಿ ಚಾಲನೆ ಸಿಕ್ಕಿದೆ. 407ನೇ ದಸರಾಗೆ ಖ್ಯಾತ ಕವಿ ನಿಸಾರ್ ಅಹಮದ್ ಅವರು, ತಾಯಿ ಚಾಮುಂಡಿದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.

 

Edited By

Shruthi G

Reported By

Sudha Ujja

Comments