ನೀರಲ್ಲಿ ಸಿಲುಕಿದ್ದ 10 ಮಂದಿ ಪ್ರವಾಸಿಗರು ಪಾರು

26 Jul 2017 4:42 PM | General
437 Report

ಚಾಮರಾಜನಗರ: ಕೆಆರ್ ಎಸ್ ನಿಂದ ತಮಿಳುನಾಡಿಗೆ ದಿಢೀರನೆ ನೀರು ಹರಿಸಿರುವ ಹಿನ್ನಲೆಯಲ್ಲಿ 10 ಮಂದಿ ಪ್ರವಾಸಿಗರು ಸಿಲುಕಿ ಕೊನೆಗೂ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಸತ್ತೆಗಾಲದಲ್ಲಿ ನಡೆದಿದೆ.

ಸತ್ತೆಗಾಲದ ಬಳಿ ಕಾವೇರಿ ನದಿಯಲ್ಲಿ ಪ್ರವಾಸಿಗರು ಆಟ ಆಡುತ್ತಿದ್ದ ವೇಳೆ ಈ ಘಟನೆ ಜರುಗಿದೆ. ಪ್ರವಾಸಿಗರು ನೀರಿಗಿಳಿಯುವ ವೇಳೆ ನೀರಿನ ಪ್ರಮಾಣ ಕಡಿಮೆಯಿತ್ತು. ಹೀಗಾಗಿ ಅವರು ನೀರಿನಲ್ಲಿ ಆಟವಾಡುತ್ತಿದ್ದರು. ಈ ವೇಳೆ ದಿಢೀರನೇ ನೀರಿನ ಪ್ರಮಾಣ ಹೆಚ್ಚಾಗಿದೆ. ನೀರು ರಭಸದಿಂದ ಬರುತ್ತಿರುವುದನ್ನು ನೋಡಿದ ಪ್ರವಾಸಿಗರು ಕಿರುಚಿದ್ದಾರೆ. ಇದನ್ನು ಕಂಡ ಸ್ಥಳೀಯರು ಸ್ಥಳಕ್ಕೆ ಬಂದು ಉದ್ದವಾದ ಏಣಿಯನ್ನು ಸೇತುವೆ ರೀತಿಯಲ್ಲಿ ಮಾಡಿ ಒಂದು ಬಂಡೆಯಿಂದ ಇನ್ನೊಂದು ಬಂಡೆಗೆ ದಾಟಿಸುವ ಮೂಲಕ ಹರಸಾಹಸ ಪಟ್ಟು ಪ್ರವಾಸಿಗರನ್ನು ಕಾಪಾಡಿದ್ದಾರೆ.

Edited By

venki swamy

Reported By

Sudha Ujja

Comments