ಚುನಾವಣೆ ಬಳಿಕ ಅಭಿಷೇಕ್ ಅಂಬರೀಶ್ ಸಿಟ್ಟಾಗಿದ್ಯಾಕೆ….!!!

19 Apr 2019 4:20 PM | Entertainment
930 Report

ಮಂಡ್ಯ  ಲೋಕಸಭೆ ಚುನಾವಣೆಯಲ್ಲಿ ಅಭಿಷೇಕ್ ಅಂಬರೀಶ್ ಅವರನ್ನು ಬಹಳವೇ ಟ್ರೊಲ್ ಮಾಡಿದ್ದರು ಜೆಡಿಎಸ್ ನಾಯಕರು. ಚುನಾವಣೆ ಮುಗಿದ ಮೇಲೆ ಅಭಿಷೇಕ್ ಮತ್ತು ಸುಮಲತಾ ಇಬ್ಬರು ಸಿಂಗಾಪುರ್’ಗೆ ಹಾರುತ್ತಾರೆ. ಅವರೆಲ್ಲಿ ಮಂಡ್ಯದಲ್ಲಿ ಇರುತ್ತಾರೆ. ಎಂದು ವ್ಯಂಗ್ಯವಾಡಿದ ಜೆಡಿಎಸ್ ಲೀಡರ್ ಗಳಿಗೆ ಅಭಿಷೇಕ್ ಸಿಕ್ಕಾಪಟ್ಟೆ ರಾಂಗ್ ಆಗಿಯೇ ಉತ್ತರ ನೀಡಿದ್ದಾರೆ. ಅಷ್ಟೇ ಅಲ್ಲದೇ ಅಮ್ಮ –ಮಗ  ಇಬ್ರೂ ವಿದೇಶದಲ್ಲಿ ಠಿಕಾಣಿ ಹುಡುತ್ತಾರೆ. ಮಂಡ್ಯದಲ್ಲಿ ಎಲ್ಲಿ ಇರುತ್ತಾರೆ, ಟಿಕೆಟ್ ಕೂಡ ಬುಕ್ ಆಗಿದೆ ಎಂದು ಟಿಕೆಟ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ರಿವೀಲ್ ಆಗಿದೆ.  ಎಂದಿದ್ದ ಜೆಡಿಎಸ್ ನಾಯಕರಿಗೆ ಅಭಿಷೇಕ್ ಕೊಟ್ಟ ಉತ್ತರವೇನು ಗೊತ್ತಾ…

ಅವರು ಇಂದು ಚುನಾವಣೆ ಮುರುದಿನವೇ ಸಿಂಗಾಪುರಕ್ಕೆ ಹಾರ್ತಾರೆ ಅನ್ನೊ ಸುದ್ದಿ ಹಾಗೂ ಸುಮಲತ ಅಂಬರೀಶ್‌ ಹಾಗೂ ಅಭಿಷೇಕ್‌ ಅವರ ಹೆಸರಿನಲ್ಲಿದ್ದ ವಿಮಾನ ಟಿಕೆಟ್‌ ಗಳು ವೈರಲ್ ಆಗಿದ್ದವು.ಇದೇ ವೇಳೆ ಇಂದು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು ಚುನಾವಣೆ ಮುರುದಿನವೇ ಸಿಂಗಾಪುರಕ್ಕೆ ಹಾರ್ತಾರೆ ಅನ್ನೊಂದು ಸುಳ್ಳು, ಮೈಸೂರು ಏರ್ಪೋರ್ಟ್‌ಗೆ ತೆರಳಿ ಸಿಂಗಾಪುರಕ್ಕೆ ಹೋಗ್ತೀನಿ ಎಂದು ತಮಾಷೆ ಮಾಡಿದರು. ಇದಲ್ಲದೇ ನಾನು ಮಂಡ್ಯದ ಮಹಾವೀರ ಸರ್ಕಲ್ ಇರುತ್ತೇನೆ ಅಂತ ಅವರು ಹೇಳಿದರು.

Edited By

Kavya shree

Reported By

Kavya shree

Comments