ಕನ್ನಡದ ಖ್ಯಾತ ನಟನ ಹತ್ಯೆಗೆ ಸುಪಾರಿ ಪಡೆದಿದ್ದ ರೌಡಿಗಳು ಅಂದರ್..!!?

09 Mar 2019 9:29 AM | Entertainment
1820 Report

ಇತ್ತಿಚಿಗೆ ಖ್ಯಾತ ನಟರೊಬ್ಬರ ಹತ್ಯೆಗೆ ಸಂಚು ರೂಪಿಸಿತ್ತು ಎನ್ನಲಾಗಿತ್ತು.. ಹತ್ಯೆಯ ಸುಫಾರಿ ಪಡೆದಿದ್ದವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.. ಕನ್ನಡದ ಖ್ಯಾತ ನಟರೊಬ್ಬರ ಹತ್ಯೆಗೆ ಸುಪಾರಿ ಪಡೆದಿದ್ದ ಆರೋಪದ ಮೇರೆಗೆ ಕುಖ್ಯಾತ ರೌಡಿಯಾದ ಭರತ್ ಅಲಿಯಾಸ್ ಸ್ಲಮ್ ಭರತ್ ಹಾಗೂ ಆತನ ಆರು ಮಂದಿ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.. ಕೆಲವು ದಿನಗಳ ಹಿಂದೆ  ಸ್ಲಂ ಭರತ್ ನನ್ನು ಕುರಿತು ತನಿಖೆ ನಡೆಸಿದಾಗ ಖ್ಯಾತ ನಟರೊಬ್ಬರ ಸುಪಾರಿ ಸಂಚು ಬೆಳಕಿಗೆ ಬಂದಿತ್ತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಅಧಿಕಾರಿಗಳು ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸುವಂತೆ ಸೂಚಿಸಿದ್ದರು.ಆ ಮೇರೆಗೆ ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹಲವಾರು ವರ್ಷಗಳಿಂದ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಕೆಂಗೇರಿ ಭರತ್‌ ಸಕ್ರಿಯವಾಗಿ ಭಾಗಿಯಾಗಿದ್ದನು… ಆತನ ಕೃತ್ಯಗಳ ಬಗ್ಗೆ ನಗರದ ಹಲವು ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ದರೋಡೆ, ಸುಲಿಗೆ ಸೇರಿದಂತೆ 30ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲು ಪಡಿಸಿಕೊಳ್ಳಲಾಗಿತ್ತು.. .ಕೆಲವು ತಿಂಗಳಿಂದ ಪೊಲೀಸರಿಗೆ ಸಿಗದೆ ಸ್ಲಂ ಭರತ್ ತಲೆಮರೆಸಿಕೊಂಡಿದ್ದನು. ಇದೀಗ  ಫೆ.5ರಂದು ಸ್ಲಂ ಭರತ್‌ನನ್ನು ಗುಂಡಿನ ದಾಳಿ ನಡೆಸಿ ಕೆಂಗೇರಿ ಸಮೀಪ ಸಿಸಿಬಿ ಬಂಧಿಸಿತ್ತು. ಈ ಸಂದರ್ಭದಲ್ಲಿ ವಿಚಾರಣೆ ನಡೆಸಿದಾಗ ನಟನ ಕೊಲೆ ಸುಪಾರಿ ಸಂಗತಿ ಬಯಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.. ಪೊಲೀಸರು ನಟನ ಹೆಸರನ್ನು ಎಲ್ಲೂ ಬಹಿರಂಗ ಪಡಿಸಿಲ್ಲ.. ಅವರಿಗೆ ಯಾವುದೇ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ನಟನ ಹೆಸರನ್ನು ಬಹಿರಂಗ ಪಡಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Edited By

Kavya shree

Reported By

Manjula M

Comments