ನಾವು ಬಾಯಿ ಬಿಟ್ಟರೆ ನೀವು ಸೂಸೈಡ್ ಮಾಡ್ಕೊತ್ತಿರಾ ಎಂದು ನಿರ್ದೇಶಕ ಗುರುಪ್ರಸಾದ್ ಹೇಳಿದ್ಯಾಕೆ..!?

31 Oct 2018 12:34 PM | Entertainment
647 Report

ಈಗಾಗಲೇ ಮೀಟೂ ಅಭಿಯಾನ ಸ್ಯಾಂಡಲ್ ವುಡ್ ನಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ. ಈ ಮೀಟೂ ಗೆ ಡೈರೆಕ್ಟರ್ ಗುರು ಪ್ರಸಾದ್ ಕೂಡ ಪ್ರತಿಕ್ರಿಯಿಸಿದ್ದಾರೆ. ನನ್ನ ಬಗ್ಗೆ ಈ ರೀತಿಯ ಆರೋಪವು ಸದ್ಯದ ಮಟ್ಟಿಗೆ ಕೇಳಿಬಂದಿಲ್ಲ. ಯಾವಾಗ ಈ ಮೀಟೂ ಕಥೆಗಳು ಪ್ರಾರಂಭವಾದವೋ ಆಗಲೇ ನನ್ನ ತಲೆಯಲ್ಲಿ ಒಂದು ಕತೆ ಹುಟ್ಟಿಕೊಂಡಿತು. ಮೀಟೂ ಆಟಗಳನ್ನೇ ಸೇರಿಸಿಕೊಂಡು ಒಂದು ಸಿನಿಮಾ ಮಾಡುತ್ತಿದ್ದೇನೆ. ಖಂಡಿತ ಆ ಸಿನಿಮಾ ಸದ್ಯದಲ್ಲೇ ಸೆಟ್ಟೇರುತ್ತದೆ ಎಂದು ಗುರು ಪ್ರಸಾದ್ ತಿಳಿಸಿದ್ದಾರೆ.

ಅಷ್ಟೆ ಅಲ್ಲದೆ ನೀವು ಏನೇ ಆರೋಪ ಮಾಡುತ್ತಿದ್ದಾಗಲೂ ನಾವು ಸೈಲೆಂಟ್ ಆಗಿದ್ದೇವೆ ಅಂದ್ರೆ ಅದು ನಮ್ಮ ದೌರ್ಬಲ್ಯ ಅಲ್ಲ, ನಿಮ್ಮ ಮೇಲೆ ಇರೋ ಕನಿಕರ. ನಾವು ಮಾತನಾಡಕ್ಕೆ ಶುರು ಮಾಡಿದರೆ ನೀವು ಸೂಸೈಡ್ ಮಾಡಿಕೊಳ್ಳುತ್ತೀರಿ ಎಂದು ಡೈರೆಕ್ಟರ್ ಗುರುಪ್ರಸಾದ್ ಕಿಡಿಕಾರಿದ್ದಾರೆ.  ನನ್ನ ಎರಡನೇ ಸಲ ಸಿನಿಮಾದಲ್ಲಿ ಸಾಕಷ್ಟು ಹಾಟ್ ದೃಶ್ಯಗಳಿವೆ. ಯಾವುದೂ ಅಶ್ಲೀಲವಾಗಿಲ್ಲ. ರೊಮ್ಯಾಂಟಿಕ್ ಹಾಗೂ ಅರೆಬೆತ್ತಲೆ ಬೆನ್ನಿನ ದೃಶ್ಯಗಳು ಇರುತ್ತವೆ ಎಂದು ಹೇಳಿದಾಗ ಸಂಗೀತಾ ಭಟ್ ಅವರೇ ನನಗೆ ಕಳುಹಿಸಿರುವ ಫೋಟೋಗಳನ್ನು ನೋಡಿದರೆ ನೀವೇ ಶಾಕ್ ಆಗ್ತೀರಾ. ನಾನು ಅರೆಬೆತ್ತಲೆ ಬೆನ್ನು ತೋರಿಸಬೇಕು ಎಂದಾಗ ಸಂಗೀತಾ ಭಟ್ ಕಳುಹಿಸಿದ ಫೋಟೋಗಳು ತಾನು ಅದಕ್ಕೂ ಮೀರಿ ಕ್ಯಾಮೆರಾ ಮುಂದೆ ತೋರಿಸುವೆ ಎನ್ನುವಂತಿತ್ತು ನಿಮಗೆ ಮೀಟೂ ಅನುಭವ ಆಗಿದ್ದರೆ ಅಂದೆ ಹೇಳಬೇಕಿತ್ತು. ಅದನ್ನೆಲ್ಲಾ ಬಿಟ್ಟು ನಿಮಗೆ ಸಿನಿಮಾಗಳಲ್ಲಿ ಅವಕಾಶ ಸಿಗದೆ ಇದ್ದಾಗ ಈ ರೀತಿ ಮಾಡುವುದು ಸರಿಯಲ್ಲ ಎಂದಿದ್ದಾರೆ. ಮಾಡೋದೆಲ್ಲಾ ಮಾಡಿ ಈಗ ಚಿತ್ರರಂಗ ಬಿಟ್ಟುಬಿಡುತ್ತೀವಿ ಅಂತಾ ನಾಟಕ ಮಾಡ್ತೀರಾ.. ನಿಮ್ಮಂತವರು ಚಿತ್ರರಂಗ ಬಿಟ್ಟು ಹೋಗುವುದೇ ಸರಿ ಎಂದು ಗುರು ಪ್ರಸಾದ್ ತಿಳಿಸಿದ್ದಾರೆ.

Edited By

Manjula M

Reported By

Manjula M

Comments