ನಾಲ್ಕು ಗಂಡಸರಿಂದ ಮೋಸಹೋದ ಈ ನಟಿ ಕೊನೆಗೆ ಸಾವನ್ನಪ್ಪಿದ್ದು ಹೇಗೆ ಅಂತಿರಾ..! ಇದನ್ನೊಮ್ಮೆ ಓದಿ

25 Jul 2018 1:32 PM | Entertainment
487 Report

ಅಂದಹಾಗೆ ಕೆಲವರ ಜೀವನಾನೇ ಹಾಗೇ ಕಣ್ರೀ ಇವರು ಹುಟ್ಟಿರೋದೇ ಕಷ್ಟಪಡೋಕೆ ಅನ್ನೋ ಹಾಗೆ ಇರುತ್ತೆ. ಆ ಕಷ್ಟಕರ ಜೀವನದ ಸಾಲಿಗೆ ಸೇರಿರೋ ಈ ನಮ್ಮ ನಟಿಯ ಕಥೆ ಮನ ಕಲಕುವಂತೆ ಇದೆ.ಅರೇ ನಮ್ಮ ಕನ್ನಡ ನಟಿಗೆ ಇಂಥಹಾ ಸ್ಥಿತಿ ಬಂದಿದ್ಯಾ ಯಾರದು ಅಂತೀರಾ..? ಅವರೇ ನಟಿ ಶ್ರೀವಿದ್ಯಾ..! ಹೌದು, ನಟಿ ಶ್ರೀವಿದ್ಯಾರ ತಂದೆಯೂ ಸಹ ಒಬ್ಬ ನಟನಾಗಿದ್ದರು. ಮುಖದ ಚರ್ಮದ ಕಾಯಿಲೆ ಬಂದ ಕಾರಣದಿಂದ ತಂದೆಗೆ ಅವಕಾಶಗಳೇ ಇಲ್ಲದೆ ಮನೆಯಲ್ಲಿಯೇ ಕೂತರು.

ತನ್ನ 13 ನೇ ವಯಸ್ಸಿನಿಂದಲೇ ಮನೆಯ ಜವಾಬ್ದಾರಿಯನ್ನು ಹೊತ್ತ ನಟಿ ಶ್ರೀವಿದ್ಯಾ ಕೂಡ ಬಣ್ಣ ಹಚ್ಚಲು ಆರಂಭಿಸಿದರು. ಹಣದ ವಿಷಯವಾಗಿ ಮನೆಯಲ್ಲಿ ಯಾವಾಗಲೂ ಜಗಳ. ಮನಶಾಂತಿ ಇರಲಿಲ್ಲ, ಚಿಕ್ಕ ವಯಸ್ಸಿನಲ್ಲಿಯೇ ನಗು ಅನ್ನೋದನ್ನ ಮರೆತು ಹೋದರು ನಟಿ ಶ್ರೀವಿದ್ಯಾ. ಮುಂದಿನ ಜೀವನವಾದರು ಸಂತೋಷವಾಗಿರುತ್ತೆ ಅಂದುಕೊಂಡು ನಟನೆಯಲ್ಲಿ ಯಶಸ್ಸು ಕಂಡ ಈ ನಟಿ ಜೀವನದಲ್ಲಿ ಮಾತ್ರ ಸೋತು ಹೋದರು.ಹೌದು, ಚಿತ್ರಗಳಲ್ಲಿ ನಟಿಸುತ್ತಿದ್ದಾಗ ಶ್ರೀವಿದ್ಯಾ ಮತ್ತು ಕಮಲ್ ಹಾಸನ್ ಮದ್ಯೆ ಪ್ರೇಮ ಚಿಗುರಿತು. ಮದುವೆಗೆ ಎರಡೂ ಕುಟುಂಬದವರು ಒಪ್ಪಿದರು, ಆದ್ರೆ ಕೊನೆಗೆ ಕಮಲ್ ಹಾಸನ್ ಅವರು ಶ್ರೀವಿದ್ಯಾ ಅವರೊಂದಿಗೆ ಬ್ರೇಕ್ ಅಪ್ ಮಾಡಿಕೊಂಡರು.ಆನಂತರ ಮಲಯಾಳಂ ನಟ ಥಾಮಸ್ ನನ್ನು ಪ್ರೀತಿಸಿ ಮದುವೆಯಾದ ಶ್ರೀವಿದ್ಯಾ , ಆತನಿಗಾಗಿ ಧರ್ಮವನ್ನೂ ಬದಲಿಸಿಕೊಂಡಳು, ನಟನೆಗೂ ಸಹ ವಿದಾಯ ಹೇಳೋಣ ಎಂದುಕೊಂಡಳು, ಆದ್ರೆ ಹಣದ ಪಿಸಾಚಿಯಾಗಿದ್ದ ಥಾಮಸ್ ಹಣಕ್ಕಾಗಿ ಶ್ರೀವಿದ್ಯಾರನ್ನು ಚಿತ್ರಹಿಂಸೆ ಕೊಡುತ್ತಾ ನಟಿಸಲು ಒತ್ತಾಯಿಸುತ್ತಿದ್ದ.

ಕೊನೆಗೆ ಥಾಮಸ್ ನನ್ನೂ ತೊರೆದು ಆಚೆ ಬಂದ ಶ್ರೀವಿದ್ಯಾ, ಕೆಲವು ವರ್ಷಗಳು ಕಳೆದ ಮೇಲೆ ಭರತ್ ಅನ್ನೋ ಡೈರೆಕ್ಟರ್ ನನ್ನು ಪ್ರೀತಿಸಿದಳು, ಆತ ಬೇರೆ ಹುಡುಗಿಯನ್ನು ಮದುವೆಯಾದ, ಒಂಟಿಯಾಗಿದ್ದ ಶ್ರೀವಿದ್ಯಾಗೆ ಮತ್ತೊಂದು ಶಾಕ್,,!  ಅದೇನಪ್ಪಾ ಅಂತೀರಾ..? ಮುಂದೆ ನೋಡಿ..ಇಷ್ಟೆಲ್ಲಾ ಕಷ್ಟಗಳನ್ನ ಅನುಭವಿಸಿದ ನಟಿ ಶ್ರೀವಿದ್ಯಾಗೆ ಬೆನ್ನೆಲುಬು ಕ್ಯಾನ್ಸರ್ ಇದೆ ಅನ್ನೋದನ್ನ ಡಾಕ್ಟರ್ ತಿಳಿಸಿದರು. ಜೊತೆಯಲ್ಲಿ ಯಾರು ಇಲ್ಲದೆ ಜೀವನ ಸಾಗಿಸಿದ ಶ್ರೀವಿದ್ಯಾ 2006 ರಲ್ಲಿ ಕ್ಯಾನ್ಸರ್ ನಿಂದ ಮರಣ ಹೊಂದಿದರು, ಸಾಯುವ ಮುನ್ನ ತನ್ನ ಆಸ್ತಿಯನ್ನು ಮನೆಕೆಲಸದ ಮಹಿಳೆಗೆ, ಒಂದು ನಾಟ್ಯ ಶಾಲೆಗೆ ಹಾಗೂ ತನ್ನ ತಮ್ಮನ ಮಕ್ಕಳಿಗೆ ಬರೆದು ಇಹಲೋಕ ತ್ಯಜಿಸಿದರು.ಇಷ್ಟಾದರೂ ಕೊನೆಯವರೆಗೂ ನಗು ಸಿಗಲಿಲ್ಲ ಈ ನಟಿಯ ಪಾಲಿಗೆ. ಹೆಸರಿಗೆ ಹೇಳಿಕೊಳ್ಳೋಕೆ ನಾಯಕಿ ಆದ್ರೆ ಅದು ತೆರೆಯಮೇಲಷ್ಟೆ, ನಿಜ ಜೀವನದಲ್ಲಿ ನಗುವನ್ನೇ ಕಾಣದ ಈ ನಟಿಯ ಗೋಳು ಹೇಳತೀರದು.

Edited By

Manjula M

Reported By

Manjula M

Comments