'ನಾಗರಹಾವು' ವೀಕ್ಷಿಸಿದ ಹ್ಯಾಟ್ರಿಕ್ ಹೀರೋ ಶಿವಣ್ಣ ಸಿನಿಮಾ ಬಗ್ಗೆ ಹೇಳಿದ್ದೇನು..?

23 Jul 2018 9:51 AM | Entertainment
418 Report

ರೆಬಲ್ ಸ್ಟಾರ್ ಅಂಬರೀಶ್ ಮತ್ತು  ಸಾಹಸಸಿಂಹ ವಿಷ್ಣುವರ್ಧನ್  ಅವರಿಗೆ ಸ್ಯಾಂಡಲ್ ವುಡ್ ನಲ್ಲಿ ಬ್ರೇಕ್ ಕೊಟ್ಟಂತಹ ಸಿನಿಮಾ ಅಂದರೆ ಅದು  ದಿವಂಗತ ಪುಟ್ಟಣ್ಣ ಕಣಗಾಲ್ ನಿರ್ದೇಶನ ಮಾಡಿದ  'ನಾಗರಹಾವು'  ಸಿನಿಮಾ… ಈ ಚಲನಚಿತ್ರ ದಶಕಗಳ ಬಳಿಕ ಹೊಸ ರೂಪದಲ್ಲಿ  ಮತ್ತೊಮ್ಮೆ ಬಿಡುಗಡೆಯಾಗಿದೆ.

ರಿ ರೀಲಿಜ್ ಆದ ಈ ಚಿತ್ರಕ್ಕೆ ಅಭಿಮಾನಿಗಳಿಂದ ಅಪಾರವಾದ ಮೆಚ್ಚುಗೆ ವ್ಯಕ್ತವಾಗುತ್ತಿದೆ, ಬಿಡುಗಡೆಯಾದ ಥಿಯೇಟರ್’ಗಳಲ್ಲಿ ಭರ್ಜರಿ ಪ್ರದರ್ಶನವನ್ನು ಕಾಣುತ್ತಿದೆ. ರವಿಚಂದ್ರನ್ ಅವರ ಸಹೋದರನಾದ ಬಾಲಾಜಿ ಹೊಸ ತಂತ್ರಜ್ಞಾನದೊಂದಿಗೆ ಈ ಚಿತ್ರವನ್ನು ಮತ್ತೆ ತೆರೆ ಮೇಲೆ ತಂದಿದ್ದಾರೆ. ಹಾಗೂ  ಅವರ ಈ ಪ್ರಯತ್ನಕ್ಕೆ ಎಲ್ಲರಿಂದಲೂ ಕೂಡ ಮೆಚ್ಚುಗೆ ವ್ಯಕ್ತವಾಗಿದೆ. ಭಾನುವಾರದಂದು ಸ್ಯಾಂಡಲ್ ವುಡ್ ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ನಾಗರಹಾವು ಚಿತ್ರವನ್ನು ನರ್ತಕಿ ಚಿತ್ರಮಂದಿರದಲ್ಲಿ ನೋಡಿದರು.. ಹೊಸ ತಂತ್ರಜ್ಞಾನದೊಂದಿಗೆ ರಿ ರೀಲಿಜ್ ಆಗಿರುವ  ಈ ಚಿತ್ರ ವೀಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ ಎಂದು ಶಿವಣ್ಣ ತಿಳಿಸಿದರು.

Edited By

Manjula M

Reported By

Manjula M

Comments