ನೀನು ಹುಡುಗಿಯಾಗಿದ್ರೆ ಯಾರೂ ಬಿಡ್ತಿರ್ಲಿಲ್ಲ’  ಅಂತ ದರ್ಶನ್ ಹೇಳಿದ್ದು ಯಾರಿಗೆ..?

05 Jul 2018 3:56 PM | Entertainment
491 Report

ಕನ್ನಡ ಚಿತ್ರರಂಗದಲ್ಲಿ ತೂಗುದೀಪ ಶ್ರೀನಿವಾಸ್ ಹಾಗೂ ದೇವರಾಜ್ ತುಂಬಾ ಒಳ್ಳೆಯ ಸ್ನೇಹಿತರಾಗಿದ್ದರು. ಇತ್ತೀಚೆಗೆ ದರ್ಶನ್ ,ಪ್ರಜ್ವಲ್ ದೇವರಾಜ್ ಹಾಗೂ ಪ್ರಣಾಮ್ ಸಿನಿಮಾಗಳಿಗೆ ತಾವೇ ಖುದ್ದು ಹಾಜರಾಗಿ ಶುಭಾಷಯ ತಿಳಿಸಿದ್ದರು.

ಪ್ರಜ್ವಲ್ ದೇವರಾಜ್ ಅಭಿನಯದ 'ಜಂಟಲ್ ಮ್ಯಾನ್ ' ಸಿನಿಮಾಗೆ ನಿನ್ನೆಯಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್  ಕ್ಲಾಪ್ ಮಾಡಿದ್ದರು. ಅದಕ್ಕೂ ಕೆಲವು ದಿನಗಳ ಹಿಂದೆ ಪ್ರಣಾಮ್ ದೇವರಾಜ್ ಅಭಿನಯದ 'ಕುಮಾರಿ 21 ಎಫ್ ' ಸಿನಿಮಾ ಟ್ರೇಲರನ್ನು ದರ್ಶನ್ ಅವರೇ ಬಿಡುಗಡೆ ಮಾಡಿದರು. ಈ ವೇಳೆ ದರ್ಶನ್ ಪ್ರಣಾಮ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಕೂಡ ಹೇಳಿದ್ದರು. 'ನಾನು ಪ್ರಣಾಮ್​​ನನ್ನು ತುಂಬಾ ಚಿಕ್ಕ ವಯಸ್ಸಿನಿಂದ ಕೂಡ ನೋಡುತ್ತಿದ್ದೇನೆ. ಬಹಳ ಕ್ಯೂಟ್. ಅದಕ್ಕೆ ಅವನಿಗೆ ಯಾವಾಗಲೂ ನಾನು ಹೇಳುತ್ತಿರುತ್ತೇನೆ. ನೀನು ಹುಡುಗಿಯಾಗಿದ್ರೆ ನಿನ್ನ ಯಾರೂ ಬಿಡ್ತಿರ್ಲಿಲ್ಲ ಅಂತ. ಕುಮಾರಿ 21 ಎಫ್ ಪ್ರಣಾಮ್ ಅಭಿನಯದ ಮೊದಲ ಸಿನಿಮವಾಗಿದ್ದು  ಸ್ಯಾಂಡಲ್​ವುಡ್​ಗೆ ಅವನಿಗೆ ಹಾರ್ಟ್ಲಿ ವೆಲ್​ಕಮ್ ಮಾಡುತ್ತಿದ್ದೆನೆ ಎಂದರು. ಈ ಸಿನಿಮಾ ತೆರೆ ಮೇಲೆ ಯಾವ ರೀತಿ ಮೂಡಿ ಬರುತ್ತದೆ ಅನ್ನೋದನ್ನ ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments