ಬಾಹುಬಲಿಯ ಖ್ಯಾತ ಸ್ಟಂಟ್ ನಿರ್ದೇಶಕ ಪೀಟರ್ ಹೇನ್ ಕಮ್ ಬ್ಯಾಕ್ ಮಾಡಿದ್ದಾರೆ....!!

27 Jun 2018 11:55 AM | Entertainment
471 Report

ದಕ್ಷಿಣ ಭಾರತದ ಖ್ಯಾತ ಸ್ಟಂಟ್ ನಿರ್ದೇಶಕ ಪೀಟರ್ ಹೇನ್ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ತೆಲುಗು, ಹಿಂದಿ, ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ ಹೆಚ್ಚು ಗುರುತಿಸಿಕೊಂಡಿರುವ ಪೀಟರ್ ಹೇನ್ ದಕ್ಷಿಣ ಭಾರತದ ಬಹುಬೇಡಿಕೆ ಮತ್ತು ಕಾಸ್ಟ್ಲಿ ಡೈರೆಕ್ಟರ್. 'ಬಾಹುಬಲಿ', 'ಮಗಧೀರ' ಅಂತಹ ಚಿತ್ರಗಳಿಗೆ ಸ್ಟಂಟ್ ಡೈರೆಕ್ಟ್ ಮಾಡಿರುವ ಪೀಟರ್ ಹೇನ್ ಈಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಸಾಹಸ ನಿರ್ದೇಶನ ಮಾಡಲಿದ್ದಾರೆ. ಇಂತಹ ನಿರ್ದೇಶಕ ಕನ್ನಡ ಕೆಲವು ಚಿತ್ರಗಳಿಗೂ ಸಾಹಸ ನಿರ್ದೇಶನ ಮಾಡಿದ್ದಾರೆ.

ಈ ಹಿಂದೆ ಪೀಟರ್ ಹೇನ್ ಯಾವ ಯಾವ ಕನ್ನಡ ಸಿನಿಮಾಗಳಿಗೆ ಸಾಹಸ ನಿರ್ದೇಶನ ಮಾಡಿದ್ದರು. ಅಷ್ಟಕ್ಕೂ, ಈಗ ಪೀಟರ್ ಹೇನ್ ಎಂಟ್ರಿ ಕೊಡ್ತಿರುವ ಶಿವರಾಜ್ ಕುಮಾರ್ ಸಿನಿಮಾ ಯಾವುದು.?  ಎಂಬುದನ್ನು ತಿಳಿಯಲು ಮುಂದೆ.... 

ವಿಶೇಷ ಅಂದ್ರೆ, ಶಿವರಾಜ್ ಕುಮಾರ್ ಜೊತೆ ಪೀಟರ್ ಹೇನ್ ಅವರದ್ದು ಎರಡನೇ ಸಿನಿಮಾ. ಈ ಹಿಂದೆ ಹ್ಯಾಟ್ರಿಕ್ ಹೀರೋ ಅಭಿನಯಿಸಿದ್ದ 'ಸತ್ಯ ಇನ್ ಲವ್' ಚಿತ್ರಕ್ಕೆ ಪೀಟರ್ ಹೇನ್ ಸ್ಟಂಟ್ ಡೈರೆಕ್ಟ್ ಮಾಡಿದ್ದರು. ಇದೀಗ 'ಎಸ್ ಆರ್ ಕೆ' ಚಿತ್ರಕ್ಕಾಗಿ ಪೀಟರ್ ಹೇನ್ ಡಾ ರಾಜಕುಮಾರ್ ಕುಟುಂಬದಿಂದ ಕುಡಿ ಲಕ್ಕಿ ಗೋಪಾಲ್ ಪ್ರಥಮ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಎಸ್ ಆರ್ ಕೆ' ಚಿತ್ರಕ್ಕಾಗಿ ದಕ್ಷಿಣ ಭಾರತದ ಖ್ಯಾತ ಸಾಹಸ ನಿರ್ದೇಶಕ ಪೀಟರ್ ಹೇನ್ ಕೆಲಸ ಮಾಡಲಿದ್ದಾರೆ.

ನಿರ್ದೇಶಕ ಲಕ್ಕಿ ಗೋಪಾಲ್ ಅವರು ಹೇಳಿದ ಕಥೆ ಕೇಳಿ ಖುಷಿಯಿಂದ ಸಾಹಸ ನಿರ್ದೇಶನ ಮಾಡಲು ಪೀಟರ್ ಹೇನ್ ಒಪ್ಪಿಕೊಂಡಿದ್ದಾರೆ. ಅಂದ್ಹಾಗೆ, ಎಸ್ ಆರ್ ಕೆ ಸಿನಿಮಾದ ಶೀರ್ಷಿಕೆ ಈಗಾಗಲೇ ಬಿಡುಗಡೆಯಾಗಿದೆ. ಕಿರಣ್ ಕುಮಾರ್ ಪ್ರೊಡಕ್ಷನ್ ಅಡಿಯಲ್ಲಿ ಕಿರಣ್ ಕುಮಾರ್ ಸಿ ಗೌಡ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ. 'ಮಫ್ತಿ' ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದ ನವೀನ್ ಕುಮಾರ್ ಕ್ಯಾಮರಾ ಕೆಲಸವನ್ನು ನಿಭಾಯಿಸುತ್ತಿದ್ದಾರೆ.

Edited By

Aruna r

Reported By

Aruna r

Comments