ಮಕ್ಕಳೊಂದಿಗೆ ಕ್ರಿಕೇಟ್ ಆಡಿದ ಜಾಗ್ವಾರ್ ನಾಯಕ  

08 Jun 2018 5:07 PM | Entertainment
414 Report

  ಜಾಗ್ವಾರ್ ನಾಯಕ ನಿಖಿಲ್ , ಸಿನಿಮಾ ಚಿತ್ರೀಕರಣ ವೇಳೆ ಹಳ್ಳಿಯಲ್ಲಿರುವ ಮಕ್ಕಳ ಜೊತೆ ಕೆಲ ಕಾಲ ಕ್ರಿಕೆಟ್ ಆಡಿ ಸಮಯವನ್ನು ಕಳೆದು ತಮ್ಮ ಸಂತಸವನ್ನು ಹಂಚಿಕೊಂಡರು.

ಸೀತಾರಾಮ ಕಲ್ಯಾಣ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್.ನ ನಾರ್ಥ್ ಬ್ಯಾಂಕ್ ಬಳಿ ಜಾಗ್ವಾರ್ ನಾಯಕ ಮಕ್ಕಳೊಂದಿಗೆ ಕ್ರಿಕೆಟ್ ಆಡಿದ್ದಾರೆ. ಕಳೆದೊಂದು ವಾರದಿಂದ ನಡೆಯುತ್ತಿರುವ ಚಿತ್ರೀಕರಣದಲ್ಲಿ ನಿಖಿಲ್ ಜೊತೆ ಕ್ರಿಕೆಟ್ ಆಡಿ ಮಕ್ಕಳು ಸಂಭ್ರಮಿಸಿದ್ದಾರೆ. ಚಿತ್ರೀಕರಣದಲ್ಲಿ ನಟಿ ಡಿಂಪಲ್ ಕ್ವೀನ್ ರಚಿತಾರಾಮ್ ಸಹ ಇದ್ದರು.

Edited By

Manjula M

Reported By

Manjula M

Comments