ಕರ್ನಾಟಕದಲ್ಲಿ ‘ಕಾಲಾ’ ಚಿತ್ರ ಪ್ರದರ್ಶನಕ್ಕೆ ಇನ್ನೂ ಕೂಡಿ ಬಂದಿಲ್ಲ ಕಾಲ..!

07 Jun 2018 10:29 AM | Entertainment
414 Report

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಕಾಲಾ' ಚಿತ್ರ ಇಂದು ತೆರೆಕಂಡಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಈ ಚಿತ್ರ ಬಿಡುಗಡೆಗೆ ಕನ್ನಡಪರ ಸಂಘಟನೆಗಳಿಂದ ವಿರೋಧವು ಕೂಡ  ವ್ಯಕ್ತವಾಗಿದೆ.

ಕಾವೇರಿ ನದಿ ನೀರು ಹಂಚಿಕೆಯ ಸಂಬಂಧವಾಗಿ ನಿರ್ವಹಣಾ ಪ್ರಾಧಿಕಾರ ರಚಿಸುವಂತೆ ಹೇಳಿಕೆಯನ್ನು ನೀಡಿದ್ದ ನಟ ರಜನಿಕಾಂತ್ ಅವರ ನಡೆಯನ್ನು ಖಂಡಿಸಿ ಇದೀಗ ಕನ್ನಡಪರ ಸಂಘಟನೆಗಳು 'ಕಾಲಾ' ಚಿತ್ರ ಪ್ರದರ್ಶಿಸುತ್ತಿರುವ ಚಿತ್ರಮಂದಿರಗಳ ಎದುರು ಪ್ರತಿಭಟನೆಯನ್ನು ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಚಿತ್ರಮಂದಿರಗಳ ಬಳಿ ಬಿಗಿ ಬಂದೋಬಸ್ತ್  ಕೂಡ ಏರ್ಪಡಿಸಲಾಗಿದೆ.'ಕಾಲಾ' ಚಿತ್ರದ ನಿರ್ಮಾಪಕರು ಚಿತ್ರ ಪ್ರದರ್ಶನಕ್ಕೆ ಅನುಮತಿಯನ್ನು ಕೋರಿ ಹೈಕೋರ್ಟ್ನ ಮೊರೆ ಹೋಗಿದ್ದರು, ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ 'ಕಾಲಾ' ಪ್ರದರ್ಶನಗೊಳ್ಳುವ ಚಿತ್ರಮಂದಿರಗಳಿಗೆ ಪೊಲೀಸರು ಬಿಗಿ ಭದ್ರತೆಯನ್ನು ನೀಡಿದ್ದಾರೆ. ಕಾಲಾ ಚಿತ್ರ ಬಿಡುಗಡೆಗೂ ಮೊದಲೇ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದ ಸೂಪರ್ ಸ್ಟಾರ್  ರಜನಿಕಾಂತ್, ತಾನೇನು ತಪ್ಪು ಮಾಡಿಲ್ಲ ದಯವಿಟ್ಟು ಚಿತ್ರ ಪ್ರದರ್ಶನಕ್ಕೆ ಸಹಕರಿಸಿ ಎಂದು ಮನವಿಯನ್ನು ಕೂಡ ಮಾಡಿದ್ದರು.

Edited By

Manjula M

Reported By

Manjula M

Comments