ಕಾಲಿವುಡ್ ನಲ್ಲೂ ಕಂಪು ಚೆಲ್ಲಲ್ಲು ಹೊರಟ “ಕೆಂಡಸಂಪಿಗೆ”

04 Apr 2018 2:45 PM | Entertainment
932 Report

ಚಂದನವನದಲ್ಲಿ ಕಾಲಿಟ್ಟವರೆಲ್ಲಾ ನೇಮು ಫೇಮು ಗಳಿಸೋಕೆ ಸಾಧ್ಯವಿಲ್ಲ. ಟ್ಯಾಲೆಂಟ್ ಜೊತೆಗೆ ಅದೃಷ್ಟನು ಇರಬೇಕು.. ಅದೇ ರೀತಿ ಚಂದನವನದಲ್ಲಿ ಕೆಂಡಸಂಪಿಗೆ ಚಿತ್ರದ ಮೂಲಕ ಸಖತ್ ಭರವಸೆಯನ್ನು ಹುಟ್ಟಿಸಿದ ನಾಯಕಿ ಮಾನ್ವಿತಾ ಹರೀಶ್. ನಟನೆ ಮಾಡಿದ ಮೊದಲ ಚಿತ್ರದಲ್ಲೆ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು. ನಂತರ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದರೂ ಕೂಡ ಮಾನ್ವಿತಾ ಅಭಿನಯಕ್ಕೆ ಬ್ರೇಕ್ ಕೊಟ್ಟಿದ್ದು ಮಾತ್ರ ಟಗರು ಸಿನಿಮಾ.

ಟಗರಿನ ಪುಟ್ಟಿ ಟಗರು ಸಿನಿಮಾದಲ್ಲಿ ಸಖತ್ ಆಗಿಯೇ ಅಭಿನಯಿಸಿದ್ದಲ್ಲದೆ ಬೇರೆ ಇಂಡಸ್ಟ್ರಿಯವರು ಕೂಡ ಇವರ ಅಭಿನಯಕ್ಕೆ ಮನಸೋತಿದ್ದಾರೆ. ಇತ್ತಿಚಿಗೆ ರಾಮ್ ಗೋಪಾಲ್ ವರ್ಮ ಸಿನಿಮಾ ನೋಡಿ ಮಾನ್ವಿತಾ ಅಭಿನಯಕ್ಕೆ ಫುಲ್ ಮಾರ್ಕ್ಸ್ ನೀಡಿದ್ದರು.. ಅಷ್ಟೆ ಅಲ್ಲದೆ ಅವರ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಮಾಡಿಕೊಂಡು 2000 ದ ನೋಟಿನ ಮೇಲೆ ಸಹಿ ಹಾಕಿ ಮಾನ್ವಿತಾ ಅವರಿಗೆ ಕೊಟ್ಟಿದ್ದು ಸುದ್ದಿಯಲ್ಲಿ ಇರುವಾಗಲೇ ಮಾನ್ವಿತಾ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ.

ಟಗರು ಪುಟ್ಟಿ ಅಲಿಯಾಸ್ ಮಾನ್ವಿತಾ  ಇನ್ನೂ ಕೆಲವೇ ದಿನಗಳಲ್ಲಿ  ಕಾಲಿವುಡ್ ಗೆ ಕಾಲಿಡುತ್ತಿದ್ದಾರೆ. ಈಗಾಗಲೇ ಬೇರೆ ಬೇರೆ ಚಿತ್ರಗಳಿಂದ ಸಿಕ್ಕಾಪಟ್ಟೆ ಆಫರ್ ಗಳು ಬಂದಿದ್ದು ಈಗಾಗಲೇ ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಕಾಲಿವುಡ್ ಮಂದಿ ಮಾನ್ವಿತರವರನ್ನು ಬರಮಾಡಿಕೊಳ್ಳುತ್ತಿದ್ದಾರೆ. ಆದರೆ ಅಭಿನಯಿಸುತ್ತಾರೋ ಇಲ್ಲವೋ ಎಂಬುದು ತಿಳಿದು ಬಂದಿಲ್ಲ. ಏನೆ ಆದರೂ ನಮ್ಮ ಕನ್ನಡದ ಹುಡುಗಿ ಪರಭಾಷೆಯ ಸಿನಿಮಾಗಳಲ್ಲಿ ಅಭಿನಯಿಸುವುದು ಖುಷಿಯ ವಿಚಾರವೇ ಸರಿ.

 



Edited By

Manjula M

Reported By

Shruthi G

Comments