ಅಭಿಮಾನಿ ಕೊಟ್ಟ ಸರ್ಪ್ರೈಸ್ ಗಿಫ್ಟ್ ಗೆ ಅಪ್ಪು ದಿಲ್ ಖುಷ್..!!

19 Feb 2018 10:49 AM | Entertainment
349 Report

ಚಿಕ್ಕಂದಿನಲ್ಲಿ ಆ ಪುಸ್ತಕ ಖರೀದಿಸೋಕೆ ಸಾಕಷ್ಟು ಕಷ್ಟ ಪಟ್ಟಿದರು ನಟ ಪುನೀತ್ ರಾಜ್‌ಕುಮಾರ್‌. ಹಲವು ದಶಕಗಳ ಬಳಿಕ ಆ ಪುಸ್ತಕ ಅಪ್ಪುವಿನ ಕೈಗೆ ಸೇರಿದೆ.ಹೌದು, ಪುನೀತ್‌ ರಾಜ್‌ಕುಮಾರ್‌ ಬಾಲ ನಟನಾಗಿ ಬಣ್ಣ ಹಚ್ಚಿದ್ದ 'ಬೆಟ್ಟದ ಹೂವು' ಚಿತ್ರವನ್ನು ನೀವು ನೋಡಿರಬಹುದು. ಈ ಚಿತ್ರದಲ್ಲಿ ಪುನೀತ್‌, ರಾಮಾಯಣ ಪುಸ್ತಕ ಕೊಂಡುಕೊಳ್ಳಲು ಬಯಸಿರುತ್ತಾರೆ. ಆದರೆ, ತಮ್ಮ ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿ ಇವರ ಮೇಲೆ ಇರುತ್ತೆ. ಅಂದು ಆ ಪುಸ್ತಕಕ್ಕೆ ಕೇವಲ 10 ರೂ. ಮಾತ್ರ ಇರುತ್ತೆ. ಇಷ್ಟು ಹಣವನ್ನು ಹೊಂದಿಸಿಕೊಳ್ಳೋಕೆ ಪ್ರಯತ್ನ ಪಡುವ ಪುನೀತ್‌, ಕೊನೆಗೂ ಆ ಪುಸ್ತಕವನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. 

ಇದೀಗ ಮೂರು ದಶಕಗಳ ಬಳಿಕ ವಾಲ್ಮೀಕ ರಾಮಾಯಣ ಪುಸ್ತಕವನ್ನು ಉಡುಗೊರೆಯಾಗಿ ಪಡೆದಿದ್ದಾರೆ ಪುನೀತ್ ರಾಜ್‌ಕುಮಾರ್‌. 'ಎಷ್ಟೇ ಹಣ ಸೇವ್ ಮಾಡಿದರು ಈ ಪುಸ್ತಕ ಕೊಂಡುಕೊಳ್ಳೋಕೆ ಆಗಿರ್ಲಿಲ್ಲ. ಈಗ ಒಬ್ಬ ಅಭಿಮಾನಿ ತನಗೆ ಈ ಪುಸ್ತಕ ಗಿಫ್ಟ್ ಮಾಡಿದ್ದಾರೆ ಎಂದು ಖುಷಿಯಿಂದ ಹೇಳಿದ್ದಾರೆ ಪವರ್ ಸ್ಟಾರ್. ಇಷ್ಟು ವರ್ಷಗಳ ನಂತರ ಅಂತೂ ವಾಲ್ಮೀಕಿ ರಾಮಾಯಣ ತನ್ನ ಕೈಗೆ ಬಂದ ಖುಷಿಯನ್ನು ಹಂಚಿಕೊಂಡಿದ್ದಾರೆ ಅಪ್ಪು.

Edited By

Shruthi G

Reported By

Shruthi G

Comments