ಸದ್ದಿಲ್ಲದೇ ಆರಂಭವಾಗಿದೆ "ನಿಖಿಲ್ ಕುಮಾರ ಸ್ವಾಮಿ ಯವರ ಕಲ್ಯಾಣ

01 Feb 2018 3:16 PM | Entertainment
325 Report

ಹೌದು, ನಿಖಿಲ್ ಕುಮಾರ್ ಕಲ್ಯಾಣಕ್ಕಾಗಿ ತಯಾರಾಗುತ್ತಿದ್ದಾರೆ. ಆದರೆ ಅದು ನಿಜ ಜೀವನಕ್ಕಲ್ಲ ಸಿನಿಮಾಗಾಗಿ. ಅದು "ಸೀತಾರಾಮ ಕಲ್ಯಾಣ" ಚಿತ್ರ. ಅಂಜನಿಪುತ್ರದ ಯಶಸ್ಸಿನ ಬಳಿಕ ನಿರ್ದೇಶಕ ಎ ಹರ್ಷ ಮಾಡುತ್ತಿರುವ ಚಿತ್ರವಿದು. ಈ ಚಿತ್ರವನ್ನು ಚೆನ್ನಾಂಬಿಕಾ ಫಿಲಸಂನಡಿ ಅನಿತಾ ಕುಮಾರಸ್ವಾಮಿ ನಿರ್ಮಿಸುತ್ತಿದ್ದಾರೆ.

ವಿಶೇಷವೆಂದರೆ, ಈ ಚಿತ್ರಕ್ಕೆ "ಅಲೆಕ್ಸಾ ಎಸ್ ಎಕ್ಸ್ ಟಿ ಡಬ್ಲೂ" ಎಂಬ ಫೋರ್ ಕೆ ರೆಸ್ಯೂಲ್ಯೂಸನ್ ಕ್ಯಾಮರಾ ಬಳಸಿಕೊಳ್ಳುತ್ತಿದ್ದಾರೆ. ನಮ್ಮ ನೈಜ ವಿಡಿಯೋಗಳನ್ನು ಸೆರೆ ಹಿಡಿಯಲು ಈ ಕ್ಯಾಮರಾ ಅತ್ಯುತ್ತಮ ಹಾಗೂ ಉನ್ನತ ಮುಂಚಿನ ಸಂವೇದಕಗಳನ್ನು ಹೊಂದಿದೆ. ಕುಮಾರ್ ಕಲ್ಯಾಣಕ್ಕಾಗಿ ಇದೇ ಮೊದಲ ಬಾರಿಗೆ ನಟಿ ರಚಿತಾ ರಾಮ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೂ ಮುನ್ನ ನಿಖಿಲ್ ಅಭಿನಯದ ಕುರುಕ್ಷೇತ್ರ ತೆರೆಗೆ ಬರಲಿದೆ. ಇದೊಂದು ಗ್ರಾಮೀಣ ಸೊಗಡಿನ ಚಿತ್ರವಾಗಿದ್ದು, ಯಾವುದೇ ಪೌರಾಣಿಕ ಚಿತ್ರ ಅಲ್ಲ.

Edited By

Shruthi G

Reported By

Madhu shree

Comments