ಪುನೀತ್​ ರಾಜ್​ಕುಮಾರ್​ ತಮ್ಮ ಅಭಿಮಾನಿಗಳಿಗೆ ಏನೆಂದು ಮನವಿ ಮಾಡಿದ್ದಾರೆ ಗೊತ್ತಾ?

21 Dec 2017 10:32 AM | Entertainment
303 Report

ಅಂಜನೀಪುತ್ರ ಚಿತ್ರದ ಮತ್ತು ನನ್ನ ಕಟೌಟ್​ಗಳಿಗೆ ಹಾರ ಹಾಕಬೇಡಿ ಮತ್ತು ಹಾಲಿನ ಅಭಿಷೇಕವನ್ನು ಮಾಡಬೇಡಿ. ಅದೇ ಹಣದಿಂದ ಹಸಿದ ಮಕ್ಕಳು ಮತ್ತು ವೃದ್ಧರಿಗೆ ನೆರವು ನೀಡಿ ಎಂದು ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಪುನೀತ್​ ರಾಜ್​ಕುಮಾರ್​ ಅಭಿನಯದ ಬಹುನಿರೀಕ್ಷಿತ ಅಂಜನೀಪುತ್ರ ಚಿತ್ರ ಇಂದು ಬಿಡುಗಡೆಯಾಗಿದೆ. ಈ ನಡುವೆ ಟ್ವೀಟ್​ ಮಾಡಿದ್ದ ಪುನೀತ್​ ಚಿತ್ರ ವೀಕ್ಷಿಸಲು ಮನವಿ ಮಾಡಿದ್ದಾರೆ. ಜತೆಗೆ ಹಾಲು, ಹಾರಕ್ಕಾಗಿ ಹಣ ದುರುಪಯೋಗ ಮಾಡದಂತೆ ಸಂದೇಶ ರವಾನಿಸಿದ್ದಾರೆ.

Edited By

Shruthi G

Reported By

Madhu shree

Comments