ಹುಟ್ಟುಹಬ್ಬದ ಸಂಭ್ರಮಾಚರಣೆ ಬೇಡ ಎಂದ ಸೂಪರ್ ಸ್ಟಾರ್

12 Dec 2017 10:26 AM | Entertainment
444 Report

ಸೂಪರ್ ಸ್ಟಾರ್ ರಜನಿಕಾಂತ್ ಇಂದು 67ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಯಾವುದೇ ರೀತಿಯ ಆಡಂಬರ ಬೇಡ ಅನ್ನೋದು ರಜನಿ ಅಭಿಪ್ರಾಯ. ಹಾಗಾಗಿ ಅವರು ರಹಸ್ಯ ಸ್ಥಳವೊಂದರಲ್ಲಿ ದಿನ ಕಳೆಯಲಿದ್ದಾರಂತೆ.

ರಜನಿ ಒಂಥರಾ ಡಿಫರಂಟ್ ಸ್ಟಾರ್. ಮಾತಲ್ಲಿ ವಿಭಿನ್ನತೆ. ನಡೆಯೋ ಶೈಲಿಯಲ್ಲೂ ಭಿನ್ನ. ಒಪ್ಪಿಕೊಳ್ಳುವ ಸಿನಿಮಾಗಳೂ ಕೂಡಾ ಯುನಿಕ್. ಅದಕ್ಕೆ ಸಾಕ್ಷಿಗಳು ಹಲವು ಇವೆ. ಹೀಗೆ ನಮ್ಮ ನಿಮ್ಮೆಲ್ಲರ ನೆಚ್ಚಿನ ನಟನ ಹುಟ್ಟು ಹಬ್ಬವನ್ನ ಅವರ ಅಭಿಮಾನಿಗಳು ವಿಭಿನ್ನ ಶೈಲಿಯಲ್ಲಿ ಆಚರಿಸುತ್ತಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್'ನಲ್ಲಿ ರುದ್ರಾಕ್ಷಿಯ ಸಸಿಯನ್ನೂ ನೆಟ್ಟು ಜನ್ಮ ದಿನ ಆಚರಿಸುತ್ತಿದ್ದಾರೆ. ಹಿಮಾಚಲಪ್ರದೇಶದಿಂದ ತೆಗೆದುಕೊಂಡು ಬಂದ ಈ ಸಸಿಯನ್ನ ರಜನಿ ಮರ ಅಂತಲೇ ಕರೆಯುತ್ತಿದ್ದಾರೆ. ರಜನಿ ಹೆಸರಲ್ಲಿಯೇ ಒಂದಷ್ಟು ಸಸಿನೂ ನೆಡುತ್ತಿದ್ದಾರೆ. ಉಳಿದಂತೆ ರಜನಿಯ ಸ್ನೇಹಿತ ರಾಜಬಹದ್ದೂರ್ ಈ ಸಂಭ್ರಮದಲ್ಲಿ ಭಾಗಿಯಾಗಿ ಕೇಕ್ ಕಟ್ ಕೂಡ ಮಾಡಲಿದ್ದಾರೆ.

Edited By

Hema Latha

Reported By

Madhu shree

Comments