ಕನ್ನಡ ರಾಜ್ಯೋತ್ಸವದಂದು ಕಿಚ್ಚ ಸುದೀಪ್ ಮಾಡಿದ ಯಡವಟ್ಟೇನು ?
ಕನ್ನಡ ರಾಜ್ಯೋತ್ಸವದ ಅಂಗವಾಗಿ ಶುಭಾಶಯ ಹೇಳುವ ಸಂದರ್ಭದಲ್ಲಿ ಕಾಗುಣಿತ ದೋಷವಾಗಿದ್ದು, ಅದನ್ನು ಅಭಿಮಾನಿಗಳು ಗಮನಕ್ಕೆ ತರುತ್ತಿದ್ದಂತೆ ಸರಿಪಡಿಸಿಕೊಂಡು ಕ್ಷಮೆ ಕೇಳಿದ್ದಾರೆ.
ಟ್ವಿಟರ್ ನಲ್ಲಿ ಶುಭಾಶಯ ಹೇಳುವಾಗ ತಪ್ಪಾಗಿರುವುದನ್ನು ಅಭಿಮಾನಿಗಳು ತಿಳಿಸುತ್ತಿದ್ದಂತೆ, ಮರು ಟ್ವೀಟ್ ಮಾಡಿ, ಕಾಗುಣಿತ ದೋಷ ಸರಿಪಡಿಸಿ ಶುಭಾಶಯ ಹೇಳಿದ್ದಾರೆ. ಟೈಪಿಂಗ್ ನಲ್ಲಿ ಆಗಿರುವ ಪ್ರಮಾದಕ್ಕೆ ಕ್ಷಮೆ ಕೇಳಿದ್ದಾರೆ. ಟ್ವಿಟರ್ ನಲ್ಲಿ ಸುದೀಪ್, ನನ್ನ ಪ್ರೀತಿಯ ಸ್ನೇಹಿತರೇ, ಕನ್ನಡ ರಾಜ್ಯೋತ್ಸವದ ಶುಭಾಶಯಗಳು, ಕನ್ನಡವಿಲ್ಲದೆ ನಾವಿಲ್ಲ. ಕನ್ನಡವಿಲ್ಲದೆ ನಾವೇನೂ ಅಲ್ಲ ಎಂದು ಹೇಳಿದ್ದಾರೆ.
Comments