ಕಿಚ್ಚನಿಗೆ ಬದಲಾವಣೆ ಬೇಕಾಗಿದೆಯಂತೆ

17 Sep 2017 11:52 AM | Entertainment
485 Report

ಬೆಂಗಳೂರು: ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಬೇಜರು ಉಂಟು ಮಾಡಿದ ವಿಷಯ ಯಾವುದು. ಈಗ ನಟ ಸುದೀಪ್ ಬದಲಾವಣೆ ಬಯಸುತ್ತಿದ್ದಾರಂತೆ.

ಅಷ್ಟಕ್ಕೂ ಕಿಚ್ಚ ಸುದೀಪ್ ಬಯಸಿರುವ ಆ ಬದಲಾವಣೆಯಾದ್ರು ಯಾವುದು, ಕಿಚ್ಚ ಸುದೀಪ್ ಅವರಿಗೆ ಹಾಗೇ ಅನ್ನಿಸಿದ್ರಾ ಯಾಕೆ? ಯಾವ ವಿಷಯವಾಗಿ? ಎಲ್ಲದಕ್ಕೂ ಇಲ್ಲಿದೆ ಉತ್ತರ ಈ ಸುದ್ದಿ ಓದಿ.

ನಟ ಸುದೀಪ್ ಅಭಿನಯದ ಹೆಬ್ಬುಲಿ ಚಿತ್ರ ನಿಮಗೆ ನೆನಪಿರಬಹುದು. ಈ ಚಿತ್ರ ನೀವು ನೋಡಿರಬಹುದು. ಈ ಚಿತ್ರದ ಕೆಲ ದೃಶ್ಯಗಳು ಜಮ್ಮು ಕಾಶ್ಮೀರದಲ್ಲಿ ಸೆರೆ ಹಿಡಿಯಲಾಗಿದೆ. ಚಿತ್ರೀಕರಣ ಹಿನ್ನಲೆ ಕಾಶ್ಮೀರಕ್ಕೆ ತೆರಳಿದ್ದ ಸುದೀಪ್ ಅಲ್ಲಿನ ಪರಿಸ್ಥಿತಿ ಕಂಡು ಬೇಜಾರಾಗಿದ್ದಾರಂತೆ.

ಅವರಿಗಾದ ನೋವನ್ನು ಹಂಚಿಕೊಂಡಿರುವ ಸುದೀಪ್, ಆ ಜಾಗ ಕಾಶ್ಮೀರ ನೋಡಿದರೆ ಎಲ್ಲೋ ಒಂದು ಕಡೆ ಬೇಜಾರಾಗುತ್ತದೆ. ಹೇಗೆ ಆಗಿದೆ ಅದು? ಅನುಭವಿಸೋಕಾದೀರೋ ಹಾಗೇ ಬಾಳೋ ಕಾಗದಿರೋ ಹಾಗೇ ಇದೆ. ಒಂದು ಕಡೆ ಅದ್ಭುತ ಜಾಗ ರಣರಂಗವಾಗಿದೆ. ಯಾವತ್ತಾದರೂ ಒಂದು ದಿನ ತಂಪಾಗಲಿ ಆ ರಾಜ್ಯ. ನಾವೆಲ್ಲರೂ ಅಲ್ಲಿ ಹೋಗಿ ಕೂರುವ ಹಾಗೆ, ನೋಡೋ ಹಾಗೆ ಆಗಲಿ ಎಂದು ಕಿಚ್ಚ ಸುದೀಪ್ ತಮ್ಮ ಮನಸ್ಸಿನಲ್ಲಿ ಅಂದು ಕೊಂಡಿದ್ದಾರಂತೆ.

 

Edited By

Suresh M

Reported By

Sudha Ujja

Comments