ಕೆರೆಗಳ ಸಂರಕ್ಷಣೆ ಕುರಿತು ಸಿಎಂ ಸಿದ್ದರಾಮಯ್ಯ ಅವರಿಗೆ ಕಿಚ್ಚ ಸುದೀಪ್ ಪತ್ರ!

10 Aug 2017 4:52 PM | Entertainment
542 Report

ಬೆಂಗಳೂರು: ಕೆರೆಗಳ ಡಿನೋಟಿಫಿಕೇಶನ್ ಮಾಡಬಾರದು ಎಂದು ಕಿಚ್ಚ ಸುದೀಪ್, ಖುದ್ದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಸುದೀಪ್ ಈ ವಿಷಯವಾಗಿ ಪತ್ರ ಬರೆದಿದ್ದು, ಅದನ್ನು ತಮ್ಮ ಫೇಸ್ ಬುಕ್ ನಲ್ಲಿ ಅಕೌಂಟ್ನಲ್ಲಿ ಶೇರ್ ಮಾಡಿದ್ದಾರೆ.

ಕೆರೆಗಳು ನಮ್ಮ ಜೀವನಾಡಿಗಳಾಗಿದ್ದು, ನಮ್ಮ ಬದುಕಿನ ಅವಿಭಾಜ್ಯ ಅಂಗಗಳಾಗಿವೆ. ಈ ನಿಟ್ಟಿನಲ್ಲಿ ಬೆಂಗಳೂರಿನ ನಿರ್ಜೀವ ಕೆರೆಗಳನ್ನು ಡಿನೋಟಿಫಿಕೇಶನ್ ಮಾಡುವ ಬದಲು ಕೆರೆಗಳ ಸಂರಕ್ಷಣೆ ಮಾಡುವುದರ ಜೊತೆಗೆ ಕೆರೆಗಳ ಅಭಿವೃದ್ಧಿಗೆ ಕ್ರಮಗಳನ್ನು ತೆಗೆದುಕೊಳ್ಳಬೇಕು' ಎಂದು ಅವರು ಮನವಿ ಮಾಡಿದ್ದಾರೆ.

ಈ ಪತ್ರವನ್ನು ಒಬ್ಬ ನಟನಾಗಿ ಬರೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಇದನ್ನು ಒಬ್ಬ ನಟನಾಗಿ ಬರೆಯದೇ, ಒಬ್ಬ ಸಾಮಾನ್ಯ ಮನುಷ್ಯನ ಪರವಾಗಿ ಬರೆಯುತ್ತಿದ್ದೇನೆ. ಈ ರಾಜ್ಯ, ನಗರ ಮತ್ತು ಜನರ ಮೇಲಿನ ಪ್ರೀತಿಗಾಗಿ ಬರೆಯುತ್ತಿರುವುದಾಗಿ' ಸುದೀಪ್ ಹೇಳಿದ್ದಾರೆ. 

Edited By

Shruthi G

Reported By

Shruthi G

Comments