ಸಿಎಂ ಪರಿಹಾರ ಖಾತೆಯಿಂದ ಹಣ ದೋಚಲು ಯತ್ನ: ಕೋಸ್ಟಲ್ವುಡ್ ನಿರ್ದೇಶಕ ಸೇರಿ 6 ಮಂದಿ ಬಂಧನ

08 Oct 2020 3:35 PM | Crime
253 Report

ಆಂಧ್ರ ಪ್ರದೇಶ ಮುಖ್ಯಮಂತ್ರಿ ರಿಲೀಫ್ ಫಂಡ್ಗೆ ಕನ್ನ ಹಾಕಲು ಹೋದ ಕೋಸ್ಟಲ್ವುಡ್ ನಿರ್ದೇಶಕ ಉದಯ ಶೆಟ್ಟಿ ಕಾಂತಾವರ, ಮೂಡಬಿದಿರೆ ನಿವಾಸಿ ಯೋಗಿಶ್ ಆಚಾರ್ಯ, ಮಂಗಳೂರಿನ ಬ್ರಿಜೇಶ್ ರೈ, ಬೆಳ್ತಂಗಡಿಯ ಗಂಗಾಧರ್ ಸುವರ್ಣ ಬಂಧಿತ ಆರೋಪಿಗಳು.

ಈ ಖದೀಮರ ತಂಡ ನಕಲಿ ಚೆಕ್ ಬಳಕೆ ಮಾಡಿಕೊಂಡು ಹಣ ವಿತ್​ ಡ್ರಾ ಮಾಡಲು  ಕಲಿ ಚೆಕ್​ಗಳನ್ನು ಸೃಷ್ಟಿಸಿದ್ದರು ಮತ್ತು ಅವುಗಳನ್ನು ಮೂರು ಬ್ಯಾಂಕ್​ಗಳಲ್ಲಿ ಜಮಾ ಮಾಡಿದ್ದರು. ಭಾರಿ ಮೊತ್ತದ ಹಣದ ವರ್ಗಾವಣೆಯ ಅನುಮಾನದಿಂದ ಎಚ್ಚೆತ್ತ ಬ್ಯಾಂಕ್​ ಮ್ಯಾನೇಜರ್​ ಆಂಧ್ರ ಸರ್ಕಾರದ ಜೊತೆ ಮಾತನಾಡಿದ್ದರು.ಪರಿಶೀಲನೆ ನಡೆಸಿದಾಗ ಸಂಚು ಬಯಲಾಗಿದೆ. ತಕ್ಷಣ ಅಧಿಕಾರಿಗಳು ಆಂಧ್ರ ಪೊಲೀಸರು ಸಂಪರ್ಕಿಸಿದ್ದಾರೆ. ಬಳಿಕ ಇದೊಂದು ಹಗರಣ ಎಂಬುದು ಬಯಲಾಗಿದೆ. ಇದೇ ವೇಳೆ ಆಂಧ್ರ ಸಿಎಂ ಪರಿಹಾರ ನಿಧಿ ಖಾತೆಯ ಎಲ್ಲ ವ್ಯವಹಾರಗಳನ್ನು ಅಮಾನತ್ತಿನಲ್ಲಿಡಲಾಗಿದೆ.

ಆರೋಪಿ ಯೋಗೀಶ್​ ಆಚಾರ್ಯ 52 ಕೋಟಿ ರೂ. ಮೌಲ್ಯದ ಚೆಕ್​ ಅನ್ನು ಮೂಡಬಿದರೆಯ ಎಸ್​ಬಿಐನಲ್ಲಿ ಡೆಪಾಸಿಟ್​ ಮಾಡಲು ಪ್ರಯತ್ನಿಸಿದ್ದ ಎನ್ನಲಾಗಿದೆ. ಆದಾಗ್ಯು ಅಕ್ರಮ ವರ್ಗಾವಣೆಗೆ ಬ್ರೇಕ್​ ಬಿದ್ದಿದ್ದು, ಯೋಗೀಶ್​ನನ್ನು ಬಂಧಿಸಲಾಗಿದೆ. ಈತನ ಮಾಹಿತಿ ಆಧಾರದ ಮೇಲೆ ಉಳಿದ ಐವರನ್ನು ಬಂಧಿಸಲಾಗಿದೆ.

Edited By

venki swamy

Reported By

venki swamy

Comments