ಬಾರದ ಲೋಕಕ್ಕೆ ಪಯಣ ಬೆಳಸಿದ ತೆಲುಗು ನಟ ನಂದಮೂರಿ ಹರಿಕೃಷ್ಣ

29 Aug 2018 10:08 AM | Crime
423 Report

ತೆಲಂಗಾಣದ ನಲ್ಗೊಂಡ ಜಿಲ್ಲೆಯ ಅನ್ನೆಪರ್ತಿ ಬಳಿ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ನಂದಮುರಿ ಹರಿಕೃಷ್ಣ ಅವರು ಬಾರದ ಲೋಕಕ್ಕೆ ಪಯಣ ಬೆಳಸಿದ್ದಾರೆ. ಆಂಧ್ರ ಮಾಜಿ ಸಿಎಂಆಗಿದ್ದಂತಹ ಎನ್​ಟಿಆರ್​ ಹಿರಿಯ ಪುತ್ರ ಇವರು. ಇವರ ಸಾವು ತೆಲುಗು ಚಿತ್ರರಂಗಕ್ಕೆ ತುಂಬಲಾರದ ನಷ್ಟದಂತಾಗಿದೆ.

ಸೀತಯ್ಯ, ಸೀತಾರಾಮು, ಸಿವರಾಮ ರಾಜು, ಟೈಗರ್​ ಹರಿಶ್ಚಂದ್ರ ಪ್ರಸಾದ್​ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ನಲಗುಂಡ ಬಳಿಯಲ್ಲಿ ಹರಿಕೃಷ್ಣ ಸೇರಿದಂತೆ ನಾಲ್ಕು ಮಂದಿ ಕಾರಿನಲ್ಲಿ ಹೋಗುತ್ತಿದ್ದರು. ಕಾರು ಮಗುಚಿ ಬಿದ್ದು ಹರಿಕೃಷ್ಣ ಅವರ ತಲೆಗೆ ತೀವ್ರ ಗಾಯವಾಗಿತ್ತು. ತಕ್ಷಣ ಅವರನ್ನು ನಾರ್ಕಟ್​ಪಲ್ಲಿಯ ಕಾಮಿನೇನಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.

Edited By

Manjula M

Reported By

Manjula M

Comments