‘ಅಟಲ’ರ ನಿಧನದ ಸುದ್ಧಿ ಕೇಳಿ ಹೃದಯಾಘಾತದಿಂದ ಸಾವನ್ನಪ್ಪಿದ್ದ ಬಿಜೆಪಿ ಕಾರ್ಯಕರ್ತ..!

18 Aug 2018 1:40 PM | Crime
1424 Report

ಮೊನ್ನೆ ಅಷ್ಟೆ ದೇಶ ಕಂಡ ಒಳ್ಳೆಯ ರಾಜಕಾರಣಿ ನಮ್ಮನ್ನೆಲ್ಲಾ ಅಗಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನದಿಂದ ಅಘಾತಗೊಂಡು ಬಿಜೆಪಿ ಕಾರ್ಯಕರ್ತನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆಯು ಗದಗನ ಯಳವತ್ತಿ ಗ್ರಾಮದಲ್ಲಿ ನಡೆದಿದೆ.

ಯಳವತ್ತಿ ಗ್ರಾಮದ ನಿವಾಸಿ ಕುಬೇರಪ್ಪ ಅವರು ಬಿಜೆಪಿ ಕಾರ್ಯಕರ್ತರಾಗಿದ್ದು, ಅಟಲ್ ಬಿಹಾರ್ ವಾಜಪೇಯಿ ನಿಧನದ ಸುದ್ಧಿ ಕೇಳಿ ಆಘಾತಕ್ಕೊಳಗಾಗಿದ್ದರು. ವಾಜಪೇಯಿ ಅವರ ಅಂತಿಮ ಯಾತ್ರೆ ಅಂತ್ಯಸಂಸ್ಕಾರವನ್ನು ನೋಡುತ್ತಲೇ ಹೃದಯಾಘಾತದಿಂದ ಕೊನೆಯುಸಿರೆಳಿದಿದ್ದಾರೆ.

Edited By

Manjula M

Reported By

Manjula M

Comments