ಗೌರಿ ಹತ್ಯೆ ಪ್ರಕರಣದಲ್ಲಿ ಆರೋಪಿ ನವೀನ್ ಕುಮಾರ್ ಜಾಮೀನು ತೀರ್ಪು ಕಾಯ್ದಿರಿಸಿದ ಕೋರ್ಟ್

07 Jul 2018 10:20 AM | Crime
401 Report

ಗೌರಿ ಹತ್ಯೆಗೆ ಆರೋಪಿಗಳಿಗೆ ಸಹಕಾರ ನೀಡಿದಂತಹ ಆರೋಪ ಹೊತ್ತಿರುವ ನವೀನ್​ಕುಮಾರ್ ಜಾಮೀನು ಜುಲೈ 9ಕ್ಕೆ ನಿರ್ಧಾರವಾಗಲಿದೆ. ಸೆಷನ್ಸ್ ಕೋರ್ಟ್​ನ ನ್ಯಾಯಾಧೀಶರಾದ ಟಿ.ಟಿ ರಾಮಲಿಂಗೇಗೌಡ ಪೀಠದಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ವಿಚಾರಣೆ ವೇಳೆ ಪ್ರಕರಣದ ತನಿಖಾಧಿಕಾರಿ ಅನುಚೇತ್ ಕೋರ್ಟ್​ಗೆ ಹಾಜರಾಗಿದ್ದರು.

ಎಸ್​ಐಟಿ ಪರ ವಾದ ಮಂಡಿಸಿದ ವಿಶೇಷ ಅಭಿಯೋಜಕರಾದ ಶ್ರೀಶೈಲ ವಡವಡಗಿ ಆರೋಪಿ ನವೀನ್ ಕುಮಾರ್​ಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು. ಪ್ರಮುಖ ಆರೋಪಿಗಳಿಗೆ ನವೀನ್ ಕುಮಾರ್ ಸಹಕಾರ ನೀಡಿರುವುದು ತನಿಖೆಯಲ್ಲಿ ಬಯಲಾಗಿದೆ ಎಂದಿದ್ದಾರೆ. ಆರೋಪಿ ನವೀನ್ ಕುಮಾರ್ ಮಂಪರು ಪರೀಕ್ಷೆಗೆ ಸಮ್ಮತಿ ನೀಡಿ  ನಂತರ ಬೇಡ ಎಂದಿದ್ದಾನೆ. ಈ ಪ್ರಕರಣದ ತನಿಖೆ ಸಂಪೂರ್ಣವಾಗಿ ಮುಗಿದಿಲ್ಲ. ಈ ಹಂತದಲ್ಲಿ ಆರೋಪಿಗೆ ಜಾಮೀನು ಮಂಜೂರು ಮಾಡಿದರೆ ತನಿಖೆಗೆ ಹಿನ್ನಡೆಯಾಗುತ್ತದೆ ಎಂದು ಮನವಿ ಮಾಡಲಾಗಿದೆ.

Edited By

Aruna r

Reported By

Manjula M

Comments