ಬಗೆದಷ್ಟೂ ಬಯಲಾಗುತ್ತಿವೆ ಹ್ಯಾರಿಸ್ ಪುತ್ರ ನಲಪಾಡ್ ನ ಕೃತ್ಯಗಳು 

23 Feb 2018 12:38 PM | Crime
434 Report

ಶಾಂತಿ ನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ನಲಪಾಡ್  ವಿಧ್ವತ್ ಮೇಲೆ ಹಲ್ಲೆ ನಡಿಸಿ ಇದೀಗ ಸೆರೆಮನೆ ವಾಸದಲ್ಲಿದ್ದಾನೆ. ಆತನ  ಆದರೆ ಆತ ನಡೆಸಿರುವ ಅನೇಕ ಪುಂಡಾಟ,ರೌಡಿ ಕೃತ್ಯಗಳು ಇದೀಗ ಒಂದೊಂದಾಗಿ ಬೆಳಕಿಗೆ ಬರುತ್ತಿವೆ.

ಈ ಹಿಂದೆ ಸ್ಟಾರ್ ಹೋಟೆಲ್ ಒಂದರಲ್ಲಿ ಪಾರ್ಟಿ ನಡೆಯುತ್ತಿರುವಾಗ ಬಾಟಲ್ ನಲ್ಲಿ ರಣಜಿ ಆಟಗಾರನೊಬ್ಬನಿಗೆ ನಲಪಾಡ್ ಮಾರಣಾಂತಿಕ ಹಲ್ಲೆ ನಡೆಸಿದ್ದ. 6 ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಆಟಗಾರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದೂರನ್ನು ನೀಡಿರಲಿಲ್ಲ. ಇದೀಗ ಹೋಟೆಲ್ ಒಂದರ ಮ್ಯಾನೇಜರ್ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಈ ಸುದ್ದಿ ಪ್ರಕಟವಾದ ಬಳಿಕ ಕರ್ನಾಟಕ ರಣಜಿ ತಂಡ ಸಿಎಂ ಸಿದ್ದರಾಮಯ್ಯನವರಿಗೆ ಟ್ವೀಟ್ ಮಾಡಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲು ಕೇಳಿಕೊಂಡಿದೆ. ನಮ್ಮ ರಾಜ್ಯದ ಆಟಗಾರರು ನಮ್ಮ ಕನ್ನಡ ನಾಡಿನ ಹೆಮ್ಮೆಯ ಪ್ರತಿನಿಧಿಗಳು, ಭಾರತದ ಮಟ್ಟದಲ್ಲಿ ನಮ್ಮ ನಾಡ ಕೀರ್ತಿಯನ್ನು ಬೆಳಗಿರುವವರು. ದಯವಿಟ್ಟು ಈ ಹಿಂಸೆಗೆ ಅಂತ್ಯ ಹಾಡಿ ಎಂದು ಟ್ವೀ ಮಾಡಿದೆ.

Edited By

Shruthi G

Reported By

Madhu shree

Comments