ರವಿ ಬೆಳಗೆರೆಗೆ ಇಂದು ಜಾಮೀನು ಸಿಗುವುದೇ?

11 Dec 2017 11:11 AM | Crime
307 Report

ಪೊಲೀಸ್ ಕಸ್ಟಡಿ ಅಂತ್ಯವಾಗುವ ಹಿನ್ನೆಲೆಯಲ್ಲಿ ಸೋಮವಾರ ರವಿ ಬೆಳಗೆರೆ ಯನ್ನು ಕೋರ್ಟ್ ಮುಂದೆ ಸಿಸಿಬಿ ಪೊಲೀಸರು ಹಾಜರುಪಡಿಸಲಿದ್ದಾರೆ. ಮತ್ತೊಂದೆಡೆ ಬೆಳಗೆರೆ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಲು ತಯಾರಿ ನಡೆಸಿದ್ದಾರೆ.

ಮಧುಮೇಹದಿಂದ ಬಳಲುತ್ತಿರುವ ರವಿ ಬೆಳಗೆರೆಗೆ ಸೂಕ್ತ ಚಿಕಿತ್ಸೆಯ ನೆರವಿನ ಅಗತ್ಯವಿದೆ, ಹೀಗಾಗಿ ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ. ಈ ನಡುವೆ ಸಿಸಿಬಿ ಕಚೇರಿಯಲ್ಲಿದ್ದ ರವಿ ಬೆಳೆಗೆರೆ ಅವರಿಗೆ ಮಲಗಲು ವಿಶೇಷ ಕೊಠಡಿ ಸೌಲಭ್ಯ ಕಲ್ಪಿಸಲಾಗಿತ್ತು. ಮಗ ಕರ್ಣ ಮತ್ತು ಪುತ್ರಿ ಚೇತನಾ ಬೆಳಗೆರೆ ಅವರು ಮನೆಯಿಂದ ಊಟ, ಉಪಾಹಾರ ತಂದುಕೊಡುತ್ತಿದ್ದರು.



Edited By

Hema Latha

Reported By

Madhu shree

Comments