ನಿರುದ್ಯೋಗಿಗಳಿಂದ ಹಣ ಪಡೆದು ಪಂಗನಾಮ ಹಾಕಿದ ನಕಲಿ ಸೈನ್ಯಾಧಿಕಾರಿ

29 Nov 2017 12:52 PM | Crime
238 Report

ಸೇನೆಯ ಅಧಿಕಾರಿಯಂತೆ ವೇಷ ಧರಿಸಿ ವ್ಯಕ್ತಿಯೊಬ್ಬ ಬೆಂಗಳೂರಿನ ಪ್ರಖ್ಯಾತ ಕಂಪನಿಗಳಲ್ಲಿ ಕೆಲಸ ಕೊಡಿಸುವುದಾಗಿ ನಿರುದ್ಯೋಗಿಗಳಿಗೆ ನಂಬಿಸಿ ಮಡಿಕೇರಿ ಸೇರಿದಂತೆ ನಾನಾ ಜಿಲ್ಲೆಗಳಲ್ಲಿ ಹಲವರಿಗೆ ಲಕ್ಷಾಂತರ ರೂ. ವಂಚಿಸಿದ್ದಾನೆ.

ಬೆಂಗಳೂರಿನಲ್ಲಿ ಸ್ಕೂಲ್​ ವ್ಯಾನ್​ ಚಾಲಕನಾಗಿರುವ ಕಾಮರಾಜ್ ಎಂಬಾತನೇ ವಂಚಕ. ಈತ ​ ನಿರುದ್ಯೋಗಿಗಳನ್ನು ಸಂಪರ್ಕಿಸಿ ಅವರಿಗೆ ಕೆಲಸ ಕೊಡಿಸುವುದಾಗಿ ಆಮಿಷ ತೋರಿಸುತ್ತಿದ್ದ. ನಂಬಿಸಿ ಲಕ್ಷಾಂತರ ರೂ. ಹಣ ಪಡೆಯುತ್ತಿದ್ದ. ಮಡಿಕೇರಿ, ಮಂಗಳೂರು ಮತ್ತು ಚಿಕ್ಕಮಗಳೂರಿನಲ್ಲಿ ಹಲವರಿಗೆ ವಂಚನೆ ಮಾಡಿ ತಲೆ ಮರೆಸಿಕೊಂಡಿದ್ದಾನೆ. ಇಷ್ಟೇ ಅಲ್ಲದೆ, ಈತ ಫೇಸ್​ಬುಕ್​ ಮತ್ತು ಸ್ನೇಹಿತರ ಮೂಲಕ ಯವತಿಯರ ಪರಿಚಯ ಮಾಡಿಕೊಂಡು ಪ್ರೀತಿಸುವ ನಾಟಕವಾಡಿ ವಂಚಿಸುತ್ತಿದ್ದ ಎಂಬುದು ಬಯಲಾಗಿದೆ. ಈತ ಚೆನ್ನೈ ಮೂಲದ ಯುವತಿಯನ್ನು ವಿವಾಹವಾಗಿ ತನ್ನ ಮನೆಯಿಂದಲೇ 60 ಸಾವಿರ ರೂ. ಕಳ್ಳತನ ಮಾಡಿ ಪರಾರಿಯಾಗಿದ್ದಾನೆ ಎಂದು ಕಾಮರಾಜ್​ ಸಹೋದರ ಜೀವನ್​ ಆರೋಪಿಸಿದ್ದಾರೆ.

Edited By

Hema Latha

Reported By

Madhu shree

Comments