ನಿತ್ಯಾನಂದ ಸ್ವಾಮಿಯ ರಾಸಲೀಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್

22 Nov 2017 11:18 AM | Crime
435 Report

ನಿತ್ಯಾನಂದ ಸ್ವಾಮಿಗೆ ಶಿಕ್ಷೆಯಾಗುವ ಸಾಧ್ಯತೆ ಇದೆ. 2010 ರಲ್ಲಿ ಸಿ.ಐ.ಡಿ. ಡಿ.ವೈ.ಎಸ್.ಪಿ. ಚರಣ್ ರೆಡ್ಡಿ ಅವರು ತನಿಖೆ ನಡೆಸಿ ವರದಿ ನೀಡಿದ್ದಾರೆ. ರಾಸಲೀಲೆಯ ಸಿ.ಡಿ.ಯ ಸತ್ಯಾಸತ್ಯತೆ ಪರಿಶೀಲಿಸಲು ದೆಹಲಿ ಫೋರೆನ್ಸಿಕ್ ಲ್ಯಾಬ್ ಗೆ ಕಳಿಸಲಾಗಿತ್ತು. ಸಿ.ಡಿ.ಯಲ್ಲಿರುವುದು ನಿತ್ಯಾನಂದನೇ ಎಂದು ವರದಿಯಲ್ಲಿ ಹೇಳಲಾಗಿದೆ.

ನಿತ್ಯಾನಂದ ಸ್ವಾಮಿಯ ರಾಸಲೀಲೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ರಾಸಲೀಲೆ ಸಿ.ಡಿ.ಯಲ್ಲಿರುವುದು ನಿತ್ಯಾನಂದ ಸ್ವಾಮಿಯೇ ಎಂದು ದೆಹಲಿ ಎಫ್.ಎಸ್.ಎಲ್. ವರದಿಯಲ್ಲಿ ಹೇಳಲಾಗಿದೆ.  ಇದನ್ನು ಕೋರ್ಟ್ ನಲ್ಲಿ ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸುವ ಸಾಧ್ಯತೆ ಇದ್ದು, ನಿತ್ಯಾನಂದ ಸ್ವಾಮಿಗೆ ಸಂಕಷ್ಟ ಎದುರಾಗಿದೆ.

Edited By

Hema Latha

Reported By

Madhu shree

Comments