A PHP Error was encountered

Severity: Warning

Message: session_start(): Failed to decode session object. Session has been destroyed

Filename: Session/Session.php

Line Number: 143

Backtrace:

File: /var/www/html/civicnews.in/public_html/application/third_party/MX/Loader.php
Line: 173
Function: _ci_load_library

File: /var/www/html/civicnews.in/public_html/application/third_party/MX/Loader.php
Line: 192
Function: library

File: /var/www/html/civicnews.in/public_html/application/third_party/MX/Loader.php
Line: 153
Function: libraries

File: /var/www/html/civicnews.in/public_html/application/third_party/MX/Loader.php
Line: 65
Function: initialize

File: /var/www/html/civicnews.in/public_html/application/modules/home/controllers/Home.php
Line: 7
Function: __construct

File: /var/www/html/civicnews.in/public_html/index.php
Line: 315
Function: require_once

ಗಣಪತಿ ಸಾವಿನ ಪ್ರಕರಣದ ಬಗ್ಗೆ ಚುರುಕುಗೊಂಡ ಸಿಬಿಐ ತನಿಖೆ | Civic News

ಗಣಪತಿ ಸಾವಿನ ಪ್ರಕರಣದ ಬಗ್ಗೆ ಚುರುಕುಗೊಂಡ ಸಿಬಿಐ ತನಿಖೆ

15 Nov 2017 11:28 AM | Crime
311 Report

ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣ ದಿನಕ್ಕೊಂದು ತಿರುವನ್ನು ಪಡೆಯುತ್ತಿದೆ. ಡಿವೈಎಸ್ಪಿ ನೇಣುಬಿಗಿದುಕೊಂಡು ಮಡಿಕೇರಿಯ ವಿನಾಯಕ ಲಾಡ್ಜ್ ನಲ್ಲಿ ಸಾವನ್ನಪ್ಪಿದ್ದರು. ಆದರೇ ಇಂತಹ ಕೊಟ್ಟಡಿಯಲ್ಲಿಯೇ ನಿನ್ನೆ ಸಿಬಿಐ ಅಧಿಕಾರಿಗಳು ಮಹಜರ್ ನಡೆಸುವ ವೇಳೆ ಒಂದು ಗುಂಡು ಪತ್ತೆಯಾಗಿದೆ. ಈ ಮೂಲಕ ಆತ್ಮಹತ್ಯೆಗೆ ಮತ್ತಷ್ಟು ತಿರುವನ್ನು ನೀಡಿದ್ದು, ಕೊಠಡಿಯಲ್ಲಿ ಗುಂಡು ಬಂದಿದ್ದಾದರೂ ಹೇಗೆ ಎಂಬ ಸಂಶಯವನ್ನು ಹುಟ್ಟು ಹಾಕಿದೆ.

ನಿನ್ನೆ ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದ ರೂಮ್ ನಲ್ಲಿ ಒಂದು ಗುಂಡು ದೊರೆಯುವ ಮೂಲಕ, ಇಂದಿನ ಸದನಕ್ಕೆ ಹಾಲು ತುಪ್ಪ ಸುರಿದಂತಾಗಿದೆ. ಈ ನಡುವೆ ಸಿಬಿಐ ತನ್ನ ತನಿಖೆಯನ್ನು ಚುರುಕುಗೊಳಿಸಿದ್ದು, ಇಂದು ಗಣಪತಿ ಸಂಬಂಧಿಕರಿಗೆ ನೋಟೀಸ್ ಜಾರಿ ಮಾಡಿ, ತನಿಖೆಗೆ ಹಾಜರಾಗುವಂತೆ ಸೂಚಿಸಿದೆ. ಈ ಹಿನ್ನಲೆಯಲ್ಲಿ ಇಂದು ಸಿಬಿಐ ಅಧಿಕಾರಿಗಳು, ಡಿವೈಎಸ್ಪಿ ಗಣಪತಿಯವರ ತಾಯಿ, ಸಹೋದರಿ ಸೇರಿದಂತೆ ಇತರರನ್ನು ವಿಚಾರಣೆ ನಡೆಸಲಿದ್ದಾರೆ. ಈ ನಡುವೆ ಇಂದು ಸಿಬಿಐ ತನ್ನ ತನಿಖೆಯನ್ನು ಚುರುಕುಗೊಳಿಸಿದ್ದು, ಮೊದಲ ಹಂತದಲ್ಲಿ ಡಿವೈಎಸ್ಪಿ ಗಣಪತಿಯವರ ಸಂಬಂಧಿಕರನ್ನು ವಿಚಾರಣೆ ನಡೆಸಲಿದೆ.

ಇಂದು ಗಣಪತಿ ಸಹೋದರಿ, ಗಣಪತಿ ತಾಯಿಗೆ ನೋಟೀಸ್ ಜಾರಿಗೊಳಿಸಿರುವ ಸಿಬಿಐ ಅಧಿಕಾರಿಗಳು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಈ ಹಿನ್ನಲೆಯಲ್ಲಿ ಇಂದು ಸಿಬಿಐ ಕಚೇರಿಗೆ ತೆರಳಲಿರುವ ಗಣಪತಿ ಸಹೋದರಿ ಹಾಗೂ ತಾಯಿ, ಸಿಬಿಐ ಅಧಿಕಾರಿಗಳಿಂದ ವಿಚಾರಣೆ ಎದುರಿಸಲಿದ್ದಾರೆ. ಈ ಎಲ್ಲಾ ವಿದ್ಯಾಮಾನಗಳ ನಡುವೆ ಇಂದು ಮೂರನೇಯ ದಿನದ ಚಳಿಗಾಲದ ಉಭಯ ಸದನಗಳ ಕಲಾಪ ಬೆಳಗಾವಿಯಲ್ಲಿ ಆರಂಭಗೊಳ್ಳಲಿದೆ. ಕಳೆದ ನಿನ್ನೆ ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣದಲ್ಲಿ ಸಚಿವ ಚಾರ್ಜ್ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಸದನಗಳಲ್ಲಿ ಗದ್ದಲ, ಕೋಲಾಹಲ ಸೃಷ್ಠಿಸಿತ್ತು. ಇಂದೂ ಈ ಪಟ್ಟನ್ನು ಮುಂದುವರೆಸಲಿರುವ ಪ್ರತಿಪಕ್ಷದ ನಾಯಕರೂ, ಜಾರ್ಜ್ ರಾಜೀನಾಮೆಗೆ ಒತ್ತಾಯಿಸಲಿದ್ದಾರೆ.

Edited By

venki swamy

Reported By

Madhu shree

Comments