ಮಿಸ್ ಯು ಮೆಸೇಜ್ ನಿಂದ ಬಯಲಾಯಿತು ಮದುಮಗನ ಕರ್ಮಕಾಂಡ

22 Sep 2017 4:04 PM | Crime
423 Report

ಪ್ರೇಯಸಿಗೆ ಮೋಸ ಮಾಡಿ ಮತ್ತೊಬ್ಬಳೊಂದಿಗೆ ಮದುವೆ ಆಗೋಕೆ ರೆಡಿಯಾದ ಮದುಮಗ. ಆದ್ರೆ ಹಸೆಮಣೆ ಏರೊ ಮುನ್ನ ಮುರಿದುಬಿದ್ದ ಮದುವೆ. ಈ ಘಟನೆಯೊಂದು ನಗರದಲ್ಲಿ ನಡೆದಿದೆ. ಮದುವೆಗೆಂದು ಬಂದಿದ್ದವರು ನಿರಾಸೆಯಿಂದ ವಾಪಸ್ ತೆರಳಿದ್ದಾರೆ. ಸದ್ಯ ಯುವತಿ ತನಗಾದ ಮೋಸಕ್ಕೆ ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ .

ನೆಲಮಂಗಲ ನಿವಾಸಿ ಅರ್ಜುನ್ ಎಂಬಾತ ಮೈಸೂರಿನ ಯುವತಿಯೊಬ್ಬಳನ್ನು ಕಳೆದ 11 ವರ್ಷದಿಂದ ಪ್ರೀತಿಸುತ್ತಿದ್ದ. ಮದುವೆಯಾಗುವುದಾಗಿ ನಂಬಿಸಿ ಇದೀಗ ದಿಢೀರ್ ಅಂತ ಮತ್ತೊಬ್ಬಾಕೆಯನ್ನು ವರಿಸಲು ರೆಡಿಯಾಗಿದ್ದ. ಅಂತೆಯೇ ನೆಲಮಂಗಲದ ಅರಿಶಿನಕುಂಟೆ ಗ್ರಾಮದ ಸಪ್ತಗಿರಿ ಕಲ್ಯಾಣ ಮಂಟಪದಲ್ಲಿ ಮದುವೆಗೆ ಭರ್ಜರಿ ತಯಾರಿನೂ ನಡೆದಿತ್ತು.

ಈ ಮಧ್ಯೆ ವರ ಅರ್ಜುನ್ ಗುರುವಾರ ರಾತ್ರಿ `ಮಿಸ್ ಯೂ’ ಅಂತ ವಾಟ್ಸಾಪ್ ಮೂಲಕ ತನ್ನ ಪ್ರಿಯತಮೆಗೆ ಮೆಸೇಜ್ ಹಾಕಿದ್ದ. ಇದರಿಂದ ಆತಂಕಗೊಂಡ ಯುವತಿ ಮೈಸೂರಿನಿಂದ ನೇರವಾಗಿ ನೆಲಮಂಗಲಕ್ಕೆ ಬಂದಿದ್ದಾಳೆ. ಈ ವೇಳೆ ಆಕೆಗೆ ಲವ್ವರ್ ಬೇರೆ ಮದುವೆಯಾಗುತ್ತಿರೋ ವಿಚಾರ ತಿಳಿಯಿತು. ಬಳಿಕ ಅಲ್ಲಿಂದ ಯುವತಿ ಮುಂಜಾನೆ 6.30ರ ಸಮಯಕ್ಕೆ ಮದುವೆ ಮಂಟಪಕ್ಕೆ ಬಂದು ರಂಪಾಟ ನಡೆಸಿದ್ದಾಳೆ. ಈ ವೇಳೆ ನೆರೆದವರು ಯುವತಿಯ ಮನವೊಲಿಸಲು ಯತ್ನಿಸಿದ್ದಾರೆ.

ಯುವತಿಯ ಗಲಾಟೆಯಿಂದ ವಧುವಿನ ಕಡೆಯವರು ಆತಂಕಗೊಂಡಿದ್ದಾರೆ. ಅಲ್ಲದೇ ಮದುವೆಗೆಂದು ಬಂದಿದ್ದವರು ನಿರಾಸೆಯಿಂದ ವಾಪಸ್ ತೆರಳಿದ್ದಾರೆ. ಸದ್ಯ ಯುವತಿ ತನಗಾದ ಮೋಸಕ್ಕೆ  ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

Edited By

Hema Latha

Reported By

Madhu shree

Comments