ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ತಳಕು ಹಾಕಿಕೊಂಡ ರಾಘವ ಶ್ರೀಗಳ ಹೆಸರು

19 Sep 2017 1:35 AM | Crime
260 Report

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ರಾಮಚಂದ್ರಪುರ ಮಠದ ರಾಘವೇಶ್ವರ ಭಾರತಿ ಮಹಾಸ್ವಾಮಿಗಳ ಹೆಸರು ಕೇಳಿ ಬರುತ್ತಿದೆ.

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ರಾಮಚಂದ್ರಪುರ ಮಠದ ರಾಘವೇಶ್ವರ ಭಾರತಿ ಮಹಾಸ್ವಾಮಿಗಳ ಹೆಸರು ತಳಕು ಹಾಕಿಕೊಂಡಿದೆ. ಅನಗತ್ಯವಾಗಿ ಎಳೆದು ತಂದು ಶ್ರೀಗಳ ಚಾರಿತ್ಯ್ಯ ಹರಣ ಮಾಡುವ ಪ್ರಯತ್ನ ಖಂಡನೀಯ ಎಂದು ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇನ್ನು ಪ್ರಕರಣ ಸಂಬಂಧ ತನಿಖಾ ತಂಡ ಫೋನ್ ಕರೆಗಳ ಆಧಾರದ ಮೇಲೆ ರಾಘವೇಶ್ವರ ಸ್ವಾಮೀಜಿಗಳ ಅವರನ್ನು ವಿಚಾರಣೆಗೆ
ಒಳಪಡಿಸುವ ಸಾಧ್ಯತೆ ಇದೆ ಎಂದು ಮಾಧ್ಯಮದಲ್ಲಿ ವರದಿಯಾಗಿದೆ. ಕಾನೂನು ಪ್ರಕಾರ ಸಾಕ್ಷಿ , ಪುರಾವೆ ಹಾಗೂ ಕುರುಹುಗಳು ಬೆನ್ನು ಹತ್ತಿ ತನಿಖೆ ಮಾಡಬೇಕು, ಅಭಿಪ್ರಾಯ ಸಂಗ್ರಹದ ಮೇಲೆ ತನಿಖೆ ಮಾಡಲು ಅವಕಾಶವಿಲ್ಲ ಎಂದು ಹೇಳಲಾಗಿದೆ.

 

 

 

Edited By

Shruthi G

Reported By

Sudha Ujja

Comments