ಕಂದಮ್ಮನನ್ನೇ ಕೆರೆಗೆ ಎಸೆದು ಹತ್ಯೆಗೈದ ತಾಯಿ!

12 Jul 2017 1:29 PM | Crime
634 Report

ಬೆಳಗಾವಿಯ ಹುಕ್ಕೇರಿ ತಾಲೂಕಿನ ಯಮಕನಮರಡಿಯಲ್ಲಿ ಮಗುವಿನ ಹತ್ಯೆಗೈದಿರುವ ಘಟನೆ ಬುಧುವಾರ ನಡೆದಿದ್ದು

ಬೆಳಗಾವಿ: 3 ತಿಂಗಳ ಮಗುವನ್ನು ತಾಯಿಯೇ ಕೆರೆಗೆ ಎಸೆದು ಮಗುವಿನ ಹತ್ಯೆಗೈದಿರುವ ಘಟನೆ ವರದಿಯಾಗಿದೆ. ಬೆಳಗಾವಿಯ ಹುಕ್ಕೇರಿ ತಾಲೂಕಿನ ಯಮಕನಮರಡಿಯಲ್ಲಿ ಬುಧುವಾರ ಘಟನೆ ನಡೆದಿದ್ದು, ಚಿಕಿತ್ಸೆಗೆ ಹಣವಿಲ್ಲದ ಹಿನ್ನಲೆಯಲ್ಲಿ ಈ ದುಷ್ಕೃತ್ಯ ಎಸಗಿರುವುದಾಗಿ ಆರೋಪಿ ತಾಯಿ ಶೃತಿ ನಂದಗಾವಿ ಪೊಲೀಸರಿಗೆ ತಿಳಿಸಿದ್ದಾರೆ,

 ಆದರೆ ಮಗುವನ್ನು ಕೆರೆಗೆ ಎಸೆದು ಕೊಲೆಗೈದಿರುವ ಹಿಂದೆ ಬೇರೆ ಏನಾದ್ರು ಕಾರಣವಿದೆಯೇ ಎಂಬುದನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ನ್ಯುಮೋನಿಯಾದಿಂದ ಬಳಲುತ್ತಿದ್ದ 3 ತಿಂಗಳ ಪುಟ್ಟ ಕಂದಮ್ಮನನ್ನೇ ಕೆರೆಗೆ ಎಸೆದಪ ಹತ್ಯೆಗೈದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಪತಿ ಸಂತೋಷ್, ಪತ್ನಿಯ ವಿರುದ್ಧದೇ ದೂರು ನೀಡಲು ನಿರ್ಧರಿಸಿರುವುದಾಗಿ ವರದಿ ವಿವರಿಸಿದೆ.

Edited By

venki swamy

Reported By

Sudha Ujja

Comments