ಪ್ರಧಾನಕಚೇರಿಗೆ ಸದ್ದಿಲ್ಲದೇ ಸಿದ್ಧತೆ..!!

23 Jul 2017 12:53 PM | Bengaluru
1180 Report

ಬೆಂಗಳೂರು: ಪ್ರಧಾನಮಂತ್ರಿ ಕಚೇರಿ ಸದ್ದಿಲ್ಲದೇ ಸಿದ್ಧತೆ ಮಾಡಿಕೊಳ್ಳುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎಂದರೆ ದಕ್ಷಿಣ ಭಾರತದಲ್ಲೂ ಬಿಜೆಪಿ ಪ್ರಧಾನ ಕಚೇರಿ ತೆರೆಯಲು ಉದ್ದೇಶಿಸಿದೆ. ಪ್ರತಿಯೊಂದು ಕೆಲಸಗಳಿಗೂ ದೆಹಲಿಗೆ ತೆರಳಬೇಕಾದ ಅನಿವಾರ್ಯತೆ ಇತ್ತು. ಆದ ಕಾರಣ ಪ್ರಧಾನ ಕಚೇರಿ ತೆರೆಯಲು ಕೇಂದ್ರ ಸರ್ಕಾರ ಬೆಂಗಳೂರನ್ನು ಆಯ್ಕೆ ಮಾಡಿಕೊಂಡಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಈ ಬಗ್ಗೆ ದಕ್ಷಿಣ ಭಾರತದಲ್ಲೂ ಬಿಜೆಪಿ ಗೆಲುವಿಗಾಗಿ, ಜನರ ಗಮನ ಸೆಳೆಯಲು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಈ ಯೋಜನೆರೂಪಿಸಿದ್ದಾರೆಯೇ ಎಂಬ ಪ್ರಶ್ನೆ ಕೂಡ ಮೂಡಿದೆ. ಕರ್ನಾಟಕವು ಬಿಜೆಪಿ ಪ್ರಾಬಲ್ಯಕ್ಕೆ ಕೇಂದ್ರ ಬಿಂದು ಸ್ಥಾನ. ಇತಿಹಾಸದಲ್ಲೇ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ಕರ್ನಾಟಕದ ಮೂಲಕವೇ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಪ್ರಧಾನ ಕಚೇರಿಗಾಗಿ ಈಗಾಗ್ಲೇ ಸಿದ್ಧತೆಗಳು

ನಡೆಯುತ್ತಿವೆ, ಇನ್ನು ಮುಂದೆ ರಾಜಕೀಯ ನಾಯಕರು ದೆಹಲಿಗೆ ಹೋಗುವ ಅನಿವಾರ್ಯತೆ ತಪ್ಪುತ್ತದೆ. ನಾಯಕರು ಜನಸಾಮಾನ್ಯರಿಗೆ ಸುಲಭವಾಗಿ ಸಿಗಲಿದ್ದಾರೆ ಎಂಬ ಲೆಕ್ಕಾಚಾರ ಪ್ರಧಾನಿ ಕಚೇರಿ ಮೂಲಗಳು ಮಾಡಿವೆ ಎನ್ನಲಾಗುತ್ತಿದೆ.

 

Edited By

venki swamy

Reported By

Sudha Ujja

Comments