ನವೋದಯ ಫಲಿತಾಂಶ ಪ್ರಕಟ!

31 Jul 2018 5:26 PM |
2922 Report

2018-19 ಸಾಲಿನ ಫಲಿತಾಂಶ ಕೊನೆಗೂ ಹೊರಬಂದಿದೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿರುವ ನವೋದಯ ವಿದ್ಯಾಶಾಲೆಗೆ ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ಮತ್ತು ನೆಲಮಂಗಲ ತಾಲೂಕುಗಳಿಂದ ತಲಾ ಇಪ್ಪತ್ತು ಮಂದಿಯಂತೆ ಒಟ್ಟು ಎಂಬತ್ತು ಮಂದಿ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ, ದೊಡ್ಡಬಳ್ಳಾಪುರ ನಗರದಲ್ಲಿರುವ ಶ್ರೀ ಗಾಯತ್ರಿಪೀಠ ಮಿತ್ರ ಬಳಗ ಟ್ರಸ್ಟ್ ಕಳೆದ ಆರು ವರ್ಷಗಳಿಂದ ನವೋದಯ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅತಿ ಕಡಿಮೆ ವೆಚ್ಚದಲ್ಲಿ ತರಬೇತಿಯನ್ನು ನುರಿತ ಅಧ್ಯಾಪಕರಿಂದ ನೀಡುತ್ತಾ ಬಂದಿದೆ, ಈ ವರ್ಷ ತರಬೇತಿ ಪಡೆದಿದ್ದ ಒಟ್ಟು ಎಂಬತ್ತ ಎರಡು ಮಕ್ಕಳಲ್ಲಿ ಲಾವಣ್ಯ ಎಸ್. [ಖಾಸ್ ಭಾಗ್] ರಕ್ಷಿತ್ ಬಿ. [ ಶಾಂತಿನಗರ] ಮನೋಜ್ ಕೃಷ್ಣ ಜಿ.[ಸಾಧು ಮಠ, ತೂಬಗೆರೆ ಪೋಸ್ಟ್ ] ಹೇಮಂತ ಕುಮಾರ ಎಂ. [ಮೇಲಿನ ನಾಯಕನಹಳ್ಳಿ] ಲಕ್ಷ್ಮಿನರಸಿಂಹ ಎಸ್.[ ಶಾಂತಿನಗರ] ಐದು ಮಂದಿ ಪ್ರತಿಭಾವಂತ ಮಕ್ಕಳು ಯಶಸ್ವಿಯಾಗಿ ನವೋದಯ ಶಾಲೆಗೆ ಪ್ರವೇಶ ಪಡೆದಿದ್ದಾರೆ, ಉಳಿದವರಲ್ಲಿ ಆರು ಮಂದಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಪ್ರವೇಶ ಪಡೆದುಕೊಂಡಿದ್ದಾರೆ.

ವಸತಿ ಶಾಲೆಗಳಿಗೆ ಆಯ್ಕೆಯಾದ ಎಲ್ಲಾ ಮಕ್ಕಳಿಗೆ ಟ್ರಸ್ಟ್ ಅಧ್ಯಕ್ಷ ಪಿ.ಸಿ.ಲಕ್ಷ್ಮೀನಾರಾಯಣ್, ಕಾರ್ಯದರ್ಶಿ ರಮೇಶ್, ಖಜಾಂಚಿ ದೇರಾನಾ ಟ್ರಸ್ಟೀ ಗಳಾದ ಕೃಷ್ಣಮೂರ್ತಿ, ಶಿವಾನಂದ್, ಸುಧಾಕರ್, ನಾರಾಯಣಪ್ಪ, ಹೆಚ್.ಎಸ್.ಶಿವಶಂಕರ್, ಮತ್ತು ಶಿಕ್ಷಕರು ಅಭಿನಂದನೆ ತಿಳಿಸಿದ್ದಾರೆ.

Edited By

Ramesh

Reported By

Ramesh

Comments