ರೈತರ ಮಧ್ಯೆ ರೈತನಾದ ಮಣ್ಣಿನ ಮಗ : ಆ.11 ಕ್ಕೆ ಪೈರು ನಾಟಿ ಮಾಡಲಿರುವ ಸಿಎಂ ಹೆಚ್’ಡಿಕೆ

07 Aug 2018 5:49 PM |
4377 Report

ನಾನು ರೈತರ ಪರ ಕಾಳಜಿಯುಳ್ಳ ಮುಖ್ಯಮಂತ್ರಿ , ನಾನೂ ರೈತ ಎಂದು ಹೇಳಿಕೊಂಡು ಬಂದಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಖುದ್ದು ಗದ್ದೆಗಿಳಿದು ನಾಟಿ ಮಾಡಲು ಮುಂದಾಗಿದ್ದಾರೆ.

ಹೌದು.. ಸಿಎಂ ಎಚ್‌'ಡಿಕೆ ಮಂಡ್ಯದ ಪಾಂಡವಪುರದ ಅರಳಕುಪ್ಪೆಯ ಸೀತಾಪುರದಲ್ಲಿ ಅಗಸ್ಟ್‌ 11 ರಂದು ಗದ್ದೆಗಿಳಿದು ರೈತರೊಂದಿಗೆ ನಾಟಿ ಕಾರ್ಯ ಮಾಡಲಿದ್ದಾರೆ. ಈ ಬಗ್ಗೆ ಸುದ್ದಿಗಾರರಿಗೆ ವಿವರ ನೀಡಿರುವ ಸಚಿವ ಸಿ.ಎಸ್‌.ಪುಟ್ಟರಾಜು 'ಕೇವಲ ತೋರಿಕೆ ಗೆ ಸಿಎಂ ಗದ್ದೆಗಿಳಿಯುತ್ತಿಲ್ಲ. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ವರೆಗೆ ರೈತರೊಂದಿಗೆ ಗದ್ದೆಯಲ್ಲಿ ದುಡಿಯಲಿದ್ದಾರೆ' ಎಂದು ತಿಳಿಸಿದರು. ಕುಮಾರಸ್ವಾಮಿಯವರು ಹಿಂದೆ ತನ್ನ ಸ್ವಂತ ಜಮೀನಿನಲ್ಲಿ ದಿನಕ್ಕೆ 8 ರಿಂದ 10 ಗಂಟೆಗಳ ಕಾಲ ದುಡಿದ ಅನುಭವ ಹೊಂದಿದ್ದಾದ್ದಾರಂತೆ.

Edited By

Shruthi G

Reported By

hdk fans

Comments