ಧ್ವಂದ್ವ ಹೇಳಿಕೆಯನ್ನು ನೀಡಿ ಸಮುದಾಯದ ದಾರಿ ತಪ್ಪಿಸಬೇಡಿ: ವಾಲೆ ಚಂದ್ರಯ್ಯ

03 May 2018 1:50 PM |
653 Report

ಕೊರಟಗೆರೆ ಮೇ.2:- ಎಲ್ಲಾ ಕಡೆ ಕಾಂಗ್ರೇಸ್ ಬೆಂಬಲಿಸಿ ಕೊರಟೆಗರೆ ವಿಧಾನ ಸಭಾ ಕ್ಷೇತ್ರದಲ್ಲಿ ಮಾತ್ರ ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್  ಸೋಲಿಸಿ ಎನ್ನುವ  ದ್ವಂದ್ವ  ನಿಲುವಿನಿಂದ  ಕೆ.ಬಿ ಸಿದ್ದಯ್ಯ  ಹೊರ ಬರಬೇಕು ಎಂದು  ತುಮಕೂರು ಮಾಜಿ ನಗರ ಸಭಾ ಉಪಾಧ್ಯಕ್ಷ ವಾಲೇ ಚಂದ್ರಯ್ಯ ತಿಳಿಸಿದರು.

       ಪಟ್ಟಣದ  ಕಾಂಗ್ರೇಸ್ ಕಚೇರಿಯಲ್ಲಿ ಹಲವು ದಲಿತ ಎಡಗೈ ಸಮುದಾಯದ ನಾಯಕರೊಟ್ಟಿಗೆ ಸಭೆ ಸೇರಿ ಸಾಹಿತಿ  ಕೆ.ಬಿ ಸಿದ್ದಯ್ಯ  ಜಿಲ್ಲಾ ಕೇಂದ್ರದಲ್ಲಿ ನೀಡಿದ್ದ ಹೇಳಿಕೆಗೆ  ಆತಂಕ ವ್ಯಕ್ತಪಡಿಸಿ ಮಾತನಾಡಿದರು.

      ಪರಂರನ್ನು ಎಡಗೈ ಸಮುದಾಯದ ವಿರೋಧಿ ಮತ್ತು ಸದಾಶಿವ ಆಯೋಗ ಅನುಷ್ಠಾನಕ್ಕೆ ಅವಕಾಶ ನೀಡಿಲ್ಲ ಎಂಬೆಲ್ಲಾ ಹೇಳಿಕೆಗಳನ್ನು ಹೇಳಬೇಟಿ ನಾನು ಒರ್ವ ದಲಿತ ಎಡಗೈ ಸಮುದಾಯಕ್ಕೆ ಸೇರಿದವನೇ ಆಗಿದ್ದೇನೆ ನನ್ನಂತೆಯೇ ಹಲವು ನಾಯಕರಿದ್ದಾರೆ ಕೊರಟಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಜಿ.ಪಂ, ತಾ.ಪಂ, ಗ್ರಾ.ಪಂ ಗಳಲ್ಲಿ ನಮ್ಮ ಸಮುದಾಯಕ್ಕೆ ಹೆಚ್ಚಿನ ಅವಕಶಾಗಳನ್ನು ಕಲ್ಪಿಸಲಾಗಿದ್ದು  ಕ್ಷೇತ್ರದೆಲ್ಲೆಡೆ ಎಡಗೈ ಸಮುದಾಯ ಆತ್ಮೀಯವಾದ ಸ್ವಾಗತ ನೀಡುತ್ತಿದ್ದಾರೆ, ಪರಂ ರ ಉತ್ತಮ ಗುಣಕ್ಕೆ ಮಾರು ಹೋಗಿ ಎಡಗೈ ಸಮುದಾಯದ ಬಹುತೇಕರು ಹಲವು ಪಕ್ಷಗಳಿಂದ ಕಾಂಗ್ರೇಸ್ ಗೆ ಸೇರ್ಪಡೆಗೊಂಡಿದ್ದಾರೆ ಎಂದರು.

       ನಮ್ಮ ಕ್ಷೇತ್ರದ ಬಗ್ಗೆ ಯಾವುದೇ ಮಾಹಿತಿಯಿಲ್ಲಧೆ  ನೀವು   ದಯಾಮಾಡಿ ಈ ರೀತಿಯ ಹೇಳಿಕೆಗಳನ್ನು ನೀಡಿಬೇಡಿ,  ಕ್ಷೇತ್ರದ ಅಭಿವೃದ್ದಿಗೆ ತಡೆ ಹಾಕುವ ಕೆಲಸವನ್ನು ಮಾಡಲೋಗಬೇಡಿ.  ಮಾದಿಗ ಜನಾಂಗದ ಹಲವು ನಾಯಕರು, ಮುಖಂಡರು, ಕಾರ್ಯಕರ್ತರು ಹಾಗೂ ಜನಾಂಗದವರು ಡಾ. ಜಿ ಪರಮೇಶ್ವರ್ ರವರ ಗೆಲುವಿಗೆ ಬೆಂಬಲವಾಗಿ ನಿಂತು ಶ್ರಮಿಸುತ್ತಿರುವುದಾಗಿ ಹೇಳಿದರು.

      ಇದೇ ಸಂಧರ್ಭದಲ್ಲಿ ಮುಖಂಡರಾದ ಚಿಕ್ಕರಂಗಯ್ಯ,  ವೆಂಕಟೇಶ ಮೂರ್ತಿ, ಮಾದಿಗದಂಡೋರ ಶಿವಕುಮಾರ್,  ಕ್ಯಾಶವಾರ ಹನುಮಂತರಾಯಪ್ಪ, ತಾ.ಪಂ ಮಾಜಿ ಉಪಾಧ್ಯಕ್ಷ ಹನುಮಂತರಾಯಪ್ಪ, ಮುತ್ತುರಾಜು, ಶ್ರೀನಾಥ್, ಮಂಜುನಾಥ್, ಹರೀಶ್, ಮಾರುತಿ ಸೇರಿದಂತೆ ಇತರರು ಇದ್ದರು.(ಚಿತ್ರ ಇದೆ)

 

Edited By

Raghavendra D.M

Reported By

Raghavendra D.M

Comments